ಉಮೇಶ್ ಬಾಣಾವರ

ಉಮೇಶ್ ಬಾಣಾವರ

324 Articles

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅರಸೀಕೆರೆ ತಾಲೂಕು ವಿಶ್ವಕರ್ಮ ಸಮುದಾಯದಿಂದ ಸ್ವಾಗತ..

ಬರುವ 26ರಂದು ಅಂದರೆ ಶನಿವಾರ ಅರಸೀಕೆರೆ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪಮುಖ್ಯಮಂತ್ರಿ  ಡಿ ಕೆ ಶಿವಕುಮಾರ್ ಹಾಗೂ ಇನ್ನಿತರ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದ ವತಿಯಿಂದ ಕಾರ್ಯಕ್ರಮ ಯಶಸ್ವಿಯಾಗಲೆಂದು  ಅರಸಿಕೆರೆ ತಾಲೂಕ್  ವಿಶ್ವಕರ್ಮ ಸಮುದಾಯದ  ಅಧ್ಯಕ್ಷರಾದ ಯೋಗೀಶ್ ಆಚಾರ್ ತಿಳಿಸಿದರು. ತಾಲೂಕಿನ  ವಿಶ್ವಕರ್ಮ ಸಮುದಾಯ ಭವನ  ಪ್ರಪ್ರಥಮವಾಗಿ ಜಾಗ ಗುರುತು ಮಾಡಿಸಿ ಕೊಟ್ಟಿದ್ದು  ಈಗಿನ ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ ಅವರು  ನಂತರ ಶಾಸಕ ಶಿವಲಿಂಗೇಗೌಡರು  ನಮ್ಮ ಸಮುದಾಯವನ್ನು ಗುರುತಿಸಿ ನಮ್ಮನ್ನು ಕರೆಸಿ  ಹಂತ ಹಂತವಾಗಿ 65 ಲಕ್ಷಕ್ಕೂ ಹೆಚ್ಚು  ಅನುದಾನವನ್ನು ಕೊಡಿಸಿ  ಇನ್ನು ಮುಂದೆಯೂ ಸಹ  ಸಮುದಾಯ ಭವನ ಪೂರ್ಣಗೊಳಿಸಲು ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿರುವುದು  ನಮ್ಮ ಇಡೀ ವಿಶ್ವಕರ್ಮ ಸಮುದಾಯಕ್ಕೆ  ಸಂತೋಷ ತಂದಿದೆ ಎಂದರು  ಅಲ್ಲದೆ  ರಾಷ್ಟ್ರೀಯ ಹೆದ್ದಾರಿ  206 ರಲ್ಲಿ ಎಪಿಎಂಸಿ ಮುಂಬಾಗ ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡಲು  ಸರ್ಕಾರಕ್ಕೆ ಮತ್ತು ಶಾಸಕರಿಗೆ ಮನವಿ ನೀಡಿದ್ದು  ಇದಕ್ಕೂ ಸಹ ಶಾಸಕ ಶಿವಲಿಂಗೇಗೌಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಗಂಡಸಿಗೆ ಹೋಬಳಿ ಸಂಘಟನಾ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ದೇವರಾಜ್. ಕಾರ್ಯದರ್ಶಿ ಪ್ರಸನ್ನ ಆಚಾರ್. ಸಹ ಸಂಘಟನಾ ಕಾರ್ಯದರ್ಶಿ ಸ್ವಾಮಿ. ನಿರ್ದೇಶಕರಾದ ನವೀನ್. ಉಪಸ್ಥಿತರಿದ್ದರು

ಎನ್‌ಪಿಎಸ್ ನಿವೃತ್ತಿ ಹಣದ ತೊಂದರೆಯ ಬಗ್ಗೆ ವಿಧಾನಸಭಾಧ್ಯಕ್ಷರ ಗಮನಕ್ಕೆ ತಂದ ಟೈಲರ್ ಸಂಘದ ಪದಾಧಿಕಾರಿಗಳು..

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಸ್ಥೆಯ ಹೊಲಿಗೆ ಕಾರ್ಮಿಕರು ಈ ಹಿಂದೆ ಕಾರ್ಮಿಕರ ಎನ್‌ಪಿಎಸ್ ನ್ಯಾಷನಲ್ ಪೆನ್ಷನ್ ಸಿಸ್ಟಮ್ ಮುಖಾಂತರ ಪ್ರತಿ ವರ್ಷ ಹಣವನ್ನು ಬೆಂಗಳೂರಿನ ಅಲಂಕೀತ್…

.. ಬಡ ಕುಟುಂಬದ 300 ಫಲಾನುಭವಿಗಳಿಗೆ ದಿನಾಂಕ 26ರಂದು  ಗುಂಪು ಮನೆಯ ಹಸ್ತಾಂತರ …                               ಅರಸೀಕೆರೆ  ನಗರಸಭಾ ವ್ಯಾಪ್ತಿಯ ಜೇನುಕಲ್ ನಗರದಲ್ಲಿ ಜಿ+1 ಒನ್ ಗುಂಪು ಮನೆಯ ಯೋಜನೆ ಅಡಿ ನಿರ್ಮಾಣವಾಗುತ್ತಿರುವ 1181 ಮನೆಗಳ ಪೈಕಿ 300 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು ದಿನಾಂಕ 26/07/2025 ರಂದು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಮಾನ್ಯ ಡಿಕೆ ಶಿವಕುಮಾರ್ ರವರು ಹಾಗೂ ಶ್ರೀ ಬಿ. ಜೆಡ್. ಜಮೀರ್ ಅಹಮದ್ ಖಾನ್ ರವರು ಮಾನ್ಯ ವಸತಿ ಸಚಿವರು ಇವರ ಸಮ್ಮುಖದಲ್ಲಿ ಈಗಾಗಲೇ ಪೂರ್ಣಪ್ರಮಾಣದಲ್ಲಿ ನಿರ್ಮಾಣವಾಗಿರುವ 300 ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು. ಎಂದು ನಗರ ಸಭೆ ಅಧ್ಯಕ್ಷರಾದ ಎಮ್ ಸಮೀ ವುಲ್ಲಾ ತಿಳಿಸಿದ್ದಾರೆ..

ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್‌ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ Siddaramaiah ಅವರು ಸಭೆ ನಡೆಸಿ, ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

. ಜಿಎಸ್‌ಟಿ ಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿಯಮಾವಳಿಗಳನ್ನು ಕೇಂದ್ರ ಸರ್ಕಾರವೇ ರಚಿಸಿದೆ. ಅವುಗಳ ಪಾಲನೆ ಮಾಡುವುದಷ್ಟೇ…

ಶ್ಯಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ  ಎಂ ಎಲ್ ಜಯರಾಮ ಅವಿರೋಧವಾಗಿ ಆಯ್ಕೆ..

ಅರಸೀಕೆರೆ ತಾಲೂಕಿನ  ಶಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಎಂ ಎಲ್ ಜಯರಾಮು ಅವಿರೋಧವಾಗಿ ಆಯ್ಕೆಯಾದರು ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ  ಹಾಗೂ ಹಿರಿಯ ರಾಜಕೀಯ ಮುಖಂಡರಾದ  ವಿಜಯಕುಮಾರ್  ರವರ ರಾಜೀನಾಮೆಯಿಂದ  ತೆರೆವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು ಚುನಾವಣೆ ಅಧಿಕಾರಿಗಳಾಗಿ ಅರಸೀಕೆರೆ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಸತೀಶ್ ಕಾರ್ಯನಿರ್ವಹಿಸಿದ್ದರು  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಶಾ. ಮಾಲಾ ಲಿಂಗರಾಜು. ಗಿರಿಯಪ್ಪ ಮಂಜಪ್ಪ. ಪುಷ್ಪಾ ಪ್ರದೀಪ್. ಮಮತಾ ಮಂಜುನಾಥ್. ಮರಿ ಸಂಕಪ್ಪ. ಮಂಜುನಾಥ್. ಮೇಲಪ್ಪಾ ಬಸಮ್ಮ ಶಾಂತಮ್ಮ ವನಜಾಕ್ಷಮ್ಮ   ಸೇರಿದಂತೆ ಶಾನೆಗೆರೆ  ಗ್ರಾಮ ಪಂಚಾಯಿತಿ ಎಲ್ಲಾ  ಸದಸ್ಯರುಗಳು ಉಪಸ್ಥಿತರಿದ್ದರು
ನೂತನ ಅಧ್ಯಕ್ಷರಿಗೆ ಅಭಿನಂದನೆ  ನೂತನ ಅಧ್ಯಕ್ಷರಾದ  ಎಂಎಲ್ ಜಯರಾಮ್ ರವರಿಗೆ  ಶಾನೆಗೆರೆ  ಅಭಿವೃದ್ಧಿ ಅಧಿಕಾರಿಗಳಾದ  ಧರ್ಮೇಂದ್ರ ಕುಮಾರ್. ಮತ್ತು ಶಿಕ್ಷಣ ಇಲಾಖೆಯ ಜಿಡಿ ಪರಮೇಶ್. ಹಿರಿಯ ರಾಜಕೀಯ ಮುಖಂಡರಾದ ಬೇವಿನಹಳ್ಳಿ ಮೋಕ್ಷರಾಜು. ಜೆಸಿಬಿ ರಾಜು  ಶುಭ ಹಾರೈಸಿದ್ದಾರೆ

*ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಗಳ ಸೌಲಭ್ಯ ವಿತರಣೆ ಪೂರ್ವಭಾವಿ ಸಭೆ.

.......ಅರಸೀಕೆರೆಬರುವ 26 ನೇ ತಾರೀಖಿನಂದು ಅರಸೀಕೆರೆ ನಗರಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಹಲವಾರು ಸಚಿವರೊಡನೆ ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಲಾಡ್ ರವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ…

ಲಕ್ಷ್ಮಿ ದೇವರ ಹಳ್ಳಿಯ ಶ್ರೀ ಅಮ್ಮನವರ ಆಷಾಢ ಮಾಸದ ವಿಶೇಷ ಪೂಜಾ ಕಾರ್ಯಕ್ರಮ.                               ಅರಸೀಕೆರೆ ತಾಲೂಕು ಸೂಳೆಕೆರೆ ಗೇಟ್ ಲಕ್ಷ್ಮಿ ದೇವರ ಹಳ್ಳಿಯ ಶ್ರೀ ಚೌಡೇಶ್ವರಿ ದೇವಿ ಯವರ ಆಷಾಢ ಮಾಸದ ವಿಶೇಷ ಪೂಜಾ ಕಾರ್ಯಕ್ರಮವು ಸೋಮವಾರ ಮತ್ತು ಮಂಗಳವಾರ ನಡೆಯುತ್ತಿದ್ದು ಇಂದು ಸಂಜೆ ರಾತ್ರಿ 8 ಗಂಟೆಗೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಇಂದು ದೇವಾಲಯದ ಶ್ರೀ ಗುರುವೇಗೌಡರ ವಂಶಸ್ಥರು ಹೊನ್ನೇನಳ್ಳಿ ಮತ್ತು ಲಕ್ಷ್ಮಿದೇವರಳ್ಳಿಯ ಗ್ರಾಮಸ್ಥರು ತಿಳಿಸಿದ್ದಾರೆ ಈ ಅದ್ದೂರಿ ಧಾರ್ಮಿಕ ಸಮಾರಂಭದಲ್ಲಿ ಅರಸೀಕೆರೆ ತಾಲೂಕಿನ ಕೆಜಿ ಅಗ್ರಹಾರ ಗ್ರಾಮದ ಕೆಂಚಪ್ಪ ದೇವರು ಚನ್ನರಾಯಪಟ್ಟಣದ ಶ್ರೀ ತಗ್ಯಮ್ಮ ದೇವಿ ಲಕ್ಷ್ಮಿ ದೇವರ ಅಳಿಯ ಕೆಂಚಪ್ಪ ಸ್ವಾಮಿ ಕೊಡಮ್ಮ ದೇವಿ ಕೆಜಿ ಅಗ್ರಹಾರ. ಹೊನ್ನೇನಹಳ್ಳಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ. ಲಕ್ಷ್ಮಿದೇವರ ಹಳ್ಳಿಯ ಶ್ರೀ ಲಕ್ಕಮ್ಮ ದೇವಿ ದೇವಿ ದೇವತೆಗಳು ಅದ್ದೂರಿ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲಿವೆ. ಸಂಜೆ ನಡೆಯುವ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಭಕ್ತಾದಿಗಳು ಪಾಲ್ಗೊಂಡು ದೇವರ ಭಕ್ತಿಯಲ್ಲಿ ತಲ್ಲೀನರಾಗಲಿದ್ದಾರೆ

ವರದಿ ಕೆ ಎನ್ ಮಂಜುನಾಥ್ ಕುಣಿಗಲ್

ಸ್ಥಗಿತಗೊಂಡ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಸೃಜನ ಕಾರ್ಯಕ್ರಮ.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಪಿಎಂಇಜಿಪಿ ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಹೊಸ ವ್ಯವಹಾರಗಳನ್ನು ಸ್ಥಾಪಿಸುವ ವ್ಯಕ್ತಿಗಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಗೆ ಸಹಾಯಧನವನ್ನು ಒದಗಿಸುತ್ತದೆಈ ಯೋಜನೆ…

- Advertisement -
Ad image