Home Uncategorized ಆಹಾರ ನಿರೀಕ್ಷಕರಾದ  ಕುಮಾರಸ್ವಾಮಿ ನಿವೃತ್ತಿ  ಆದ್ದರಿಂದ ಅಭಿನಂದನೆ

ಆಹಾರ ನಿರೀಕ್ಷಕರಾದ  ಕುಮಾರಸ್ವಾಮಿ ನಿವೃತ್ತಿ  ಆದ್ದರಿಂದ ಅಭಿನಂದನೆ

3
0

ಅರಸೀಕೆರೆ ತಾಲೂಕಿನಲ್ಲಿ 2018ನೇ ಸಾಲಿನಿಂದ ಇಲ್ಲಿಯವರೆಗೆ ಆಹಾರ ಇಲಾಖೆಯಲ್ಲಿ  ಆಹಾರ ನಿರೀಕ್ಷಕರಾಗಿ  ಸೇವೆ ಸಲ್ಲಿಸಿದ ಕುಮಾರಸ್ವಾಮಿ  ಇಂದು ನಿವೃತ್ತಿ ಹೊಂದಿದ್ದರಿಂದ ಆಹಾರ ಇಲಾಖೆಯ ಶಿರಸ್ತೆದರಾದ  ಬಾಲಚಂದ್ರ  ಆಹಾರ ನಿರೀಕ್ಷಕರಾದ ಶುಭ ರವರು ಕುಮಾರಸ್ವಾಮಿಯವರಿಗೆ  ಅಭಿನಂದನೆ ಸಲ್ಲಿಸಿದರು

ನಂತರ ಮಾತನಾಡಿದ  ಆಹಾರ ಇಲಾಖೆ ಶಿರಸ್ತೆದಾರರಾದ  ಬಾಲಚಂದ್ರ ರವರು ಕುಮಾರಸ್ವಾಮಿ ಕಳೆದ ಆರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದಾರೆ ಹಾಗೂ ಇಲಾಖೆಯ ಸಿಬ್ಬಂದಿಗಳೊಂದಿಗೆ ಹಾಗೂ ತಾಲೂಕಿನ ಪಡಿತರ ವಿತರಕರೊಂದಿಗೆ  ಸದಾ ಅನ್ಯೋನ್ಯತೆಯಿಂದ  ಸೇವೆ ಸಲ್ಲಿಸಿದ್ದರು ಅವರ ನಿವೃತ್ತಿ ಜೀವನ  ಸುಖಕರವಾಗಿರಲಿ ಎಂದು ಬಾಲಚಂದ್ರ ರವರು ಹಾರೈಸಿದ್ದಾರೆ

ಅರಸೀಕೆರೆ ತಾಲ್ಲೂಕು ಪಡಿತರ ವಿತರಕರ ಸಂಘ ವತಿಯಿಂದ ಅಭಿನಂದನೆ

ಅರಸಿಕೆರೆ ತಾಲೂಕಿನ ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ವೇದಮೂರ್ತಿ ಉಪಾಧ್ಯಕ್ಷರಾದ ಚನ್ನಾಪುರ ಶಿವರಾಜ್ ಖಜಾಂಚಿಗಳಾದ ಬಾಣಾವರ ಜಯಣ್ಣ  ಸೇರಿದಂತೆ ಹಲವಾರು ಪಡಿತರ ವಿತರಕರು  ಹಾಗೂ ಅಭಿಮಾನಿಗಳು ಕಚೇರಿಗೆ ತೆರಳಿ  ಕುಮಾರಸ್ವಾಮಿ ಅವರಿಗೆ ಶಾಲು ಹೊದಿಸಿ  ಅಭಿನಂದಿಸಿದರು

LEAVE A REPLY

Please enter your comment!
Please enter your name here