ಉಮೇಶ್ ಬಾಣಾವರ

ಉಮೇಶ್ ಬಾಣಾವರ

324 Articles

ಸಕಲೇಶಪುರ : ಪುರಸಭೆ ವ್ಯಾಪ್ತಿಯ 21ನೇ ವಾರ್ಡ್ ನ (ಆಚಂಗಿ) 2ನೇ ಕ್ರಾಸ್, ಹದಗೆಟ್ಟ ರಸ್ತೆ ದುರಸ್ಥಿಗೆ ಒತ್ತಾಯ, ನಿವಾಸಿಗಳ ವಿನೂತನ ಪ್ರತಿಭಟನೆ! ತಕ್ಷಣವೇ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಶ್ರೀಯುತ ಸಿಮೆಂಟ್ ಮಂಜುಪುರಸಭೆ ವ್ಯಾಪ್ತಿಯ 21ನೇ ವಾರ್ಡ್ ನ (ಆಚಂಗಿ) 2ನೇ ಕ್ರಾಸ್ ಗ್ರಾಮಸ್ಥರು ನಿವಾಸಿಗಳು ತಮ್ಮ ಪ್ರದೇಶದ ರಸ್ತೆಯ ದಯನೀಯ ಸ್ಥಿತಿಯಿಂದ ಬೇಸತ್ತು ಸಾಂಕೇತಿಕವಾಗಿ ಗುಂಡಿ ಬಿದ್ದ ಜಾಗಕ್ಕೆ ಜಾಗೃತ ಮುನ್ಸೂಚನಾ ಕ್ರಮ ದೊಂದಿಗೆ ಪ್ರತಿಭಟನೆ ಮುಂದಾಗಿದ್ದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಶ್ರೀಯುತ ಸಿಮೆಂಟ್ ಮಂಜು ರಸ್ತೆಯನ್ನು ವೀಕ್ಷಿಸಿ ಮತ್ತು ಶೀತಲಾವಸ್ಥೆಯಲ್ಲಿರುವ ಒಳಚರಂಡಿ ದುರಸ್ತಿ ಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಶೀಘ್ರವಾಗಿ ರಸ್ತೆ ಒಳ ಚರಂಡಿ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿದರು .ವರದಿ : ಭರತ್ ಮಲ್ನಾಡ್

ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಮ್ ರವರಿಗೆ ಎಲ್ಲಾ ಪತ್ರಕರ್ತರ ಸಂಘಟನೆಗಳ ಕಾರ್ಯಾಗಾರಕ್ಕೆ ಅನುದಾನ ಒದಗಿಸಲು ಮಹಾಒಕ್ಕೂಟ ಒತ್ತಾಯ :- ದಿನಾಂಕ 17-07-2025, ಗುರುವಾರ ಸಂಜೆ ಬೆಂಗಳೂರಿನಲ್ಲಿರುವ ರಾಜ್ಯದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಮಾನ್ಯ ಆಯೇಷಾ ಖಾನಮ್ ರವರನ್ನ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ಭೇಟಿ ಮಾಡಿ, ರಾಜ್ಯದ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಮ್ ರವರಲ್ಲಿ ಮನವರಿಕೆ ಮಾಡಲಾಗಿ, ಸಣ್ಣ-ಮಧ್ಯಮ ಮತ್ತು ದಿನಪತ್ರಿಕೆ (ಮಾಧ್ಯಮ ಪಟ್ಟಿಗೆ ಸೇರಿಲ್ಲದ) ಪತ್ರಿಕೆಗಳಿಗೆ ವಾರ್ಷಿಕ 2,00,000 (ಎರಡು ಲಕ್ಷರೂಗಳ ಪ್ರೋತ್ಸಾಹ ಜಾಹೀರಾತು) ರಾಜ್ಯ ವಾರ್ತಾ ಇಲಾಖೆಯಿಂದ ಕೊಡಿಸುವಂತೆ ಮನವಿ ಮಾಡಲಾಗಿ, ಈ ವಿಚಾರದ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕೆಂದು ಮಾನ್ಯ ಆಯೇಷಾ ಖಾನಮ್ ರವರಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದಿಂದ ಮನವಿ ಮಾಡಲಾಗಿ, ನಮ್ಮ ಮನವಿಗೆ ಸ್ಪಂಧಿಸಿದ ಮಾನ್ಯ ಆಯೇಷಾ ಖಾನಮ್ ರವರಿಗೆ ಧನ್ಯವಾದಗಳ ಜೊತೆಗೆ ತಮ್ಮ ಮಾಧ್ಯಮ ಅಕಾಡೆಮಿ ವತಿಯಿಂದ ಪತ್ರಕರ್ತರ ಕಾರ್ಯಗಾರಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೊಂದೇ ಅನುದಾನ ನೀಡುತ್ತಿದ್ದು ಇನ್ನು ಮುಂದೆ ಎಲ್ಲಾ ಪತ್ರಕರ್ತರ ರಾಜ್ಯ ಸಂಘಟನೆಗಳಿಗೆ ಅನುದಾನ ಹಂಚಿಕೆಯಾಗಿ ಕಾರ್ಯಗಾರಗಳು ನಡೆಸುವುದಕ್ಕೆ ತಾವುಗಳು ಅನುವು ಮಾಡಿಕೊಡಲೇಬೇಕೆಂದು ಒಕ್ಕೂಟ ಒತ್ತಾಯಿಸಿದ್ದಕ್ಕೆ ಎಲ್ಲಾ ಸಂಘಟನೆಗಳಿಗೂ ಅನುದಾನ ನೀಡುವುದಾಗಿ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಸಮ್ಮತಿ ಸೂಚಿಸಿದ್ದಾರೆ..

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರು), ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶಿವಪ್ರಸಾದ್ ಜಿ…

:ಭೂಸ್ವಾಧೀನಾಧಿಕಾರಿ ಎನ್.ವಿ ನಟೇಶ್ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೊಡಿಗೆ.

ಅರಸೀಕೆರೆ : ಹಾಸನ-ಹಿರಿಯೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಚೇರಿಯಲ್ಲಿ ಇತ್ತೀಚಿಗೆ ತರೀಕೆರೆ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ವರ್ಗಾವಣೆಗೊಂಡ ಈ ಕಚೇರಿಯ ವಿಶೇಷ ಭೂಸ್ವಾಧೀನಾಧಿಕಾರಿ ಎನ್. ವಿ.ನಟೇಶ್…

ಅರಸೀಕೆರೆ ನಗರಸಭೆಯಿಂದ ಮುಂದುವರೆದ ಸ್ವಾಗತ ಕಮಾನು ನಿರ್ಮಾಣ.

ಅರಸಿಕೆರೆಯ ಧಾರ್ಮಿಕ ಆದ್ಯಾತ್ಮಿಕ ಕೇಂದ್ರಗಳ ಬಗ್ಗೆ ಇತಿಹಾಸಗಳನ್ನು ತಿಳಿ ಹೇಳುವ ನಾಮಫಲಕ ಸ್ವಾಗತ ಕಮಾನುಗಳು ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ನಿರ್ಮಾಣಗೊಂಡು ಅರಸಿಕೆರೆ ನಗರದ ಅಂದವನ್ನು…

ಕಾ ನಿ ಪ ಧ್ವನಿ (ರಿ)ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ ಗೋವಿದರಾಜು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ವಿ.ಅರುಣ್ ಕುಮಾರ್ ಅವಿರೋಧ ಆಯ್ಕೆ :-.

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಹಾಗೂ ಜಗಳೂರು ಲಕ್ಷ್ಮಣ್ ರಾವ್ ಅವರ ಮಾರ್ಗ ದರ್ಶನದಲ್ಲಿ ಇಂದು ಬೆಳಿಗ್ಗೆ…

ಜಿಲ್ಲಾ ಕಾರ್ಯಕಾರ್ಣಿ ಸಮಿತಿಯ ಮೊದಲ ಸಭೆಯ ಸಂಕ್ಷಿಪ್ತ ವರದಿ’ಪರಿಸರಕ್ಕಾಗಿ ನಾವು’ ಕರ್ನಾಟಕ ರಾಜ್ಯ ಸಂಘಟನೆಯ ಹಾಸನ ಜಿಲ್ಲಾ ಕಾರ್ಯಕಾರ್ಣಿ ಸಮಿತಿಯ ಸಭೆಯು ದಿನಾಂಕ 12/07/2025ರ ಶನಿವಾರದಂದು ಅರಕಲಗೂಡು ತಾಲೂಕು, ಕೊಣ್ಣನೂರು ಹೋಬಳಿ, ಬಿಸಿಲಹಳ್ಳಿ ಗ್ರಾಮದಲ್ಲಿ ಪರಿಸರಕ್ಕಾಗಿ ರಾಜ್ಯ ಸಂಘಟನೆ ಅಧ್ಯಕ್ಷರಾದ ಶ್ರೀ ಎ ಟಿ ರಾಮಸ್ವಾಮಿ ಅವರ ಮನೆಯಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಭೆಯಲ್ಲಿ ’ಪರಿಸರಕ್ಕಾಗಿ ನಾವು’ ಸಂಘಟನೆಯ ಒಟ್ಟು 43 ಕಾರ್ಯಕರ್ತರು ಭಾಗವಹಿಸಿದ್ದರು. ಸಂಘಟನೆಯ ರಾಜ್ಯ ಅಧ್ಯಕ್ಷರು ಶ್ರೀ ಎ ಟಿ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀ ಪರಶುರಾಮೇಗೌಡ, ಸಂಘಟನಾ ಕಾರ್ಯದರ್ಶಿ ಮಮತಾ ರಾಣಿ ಎಸ್ ಎನ್, ಹಾಸನ ಜಿಲ್ಲಾ ಸಮಿತಿಯ 16 ಪದಾಧಿಕಾರಿಗಳು, ’ಪರಿಸರಕ್ಕಾಗಿ ನಾವು’ ಸಂಘಟನೆಯ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳ 15 ಹಾಗೂ ಮೈಸೂರು ಜಿಲ್ಲೆಯ 7 ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಪರಿಸರ ರಕ್ಷಣೆಗಾಗಿ ನಡೆದ ವಿಸ್ತೃತವಾಗಿ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಲಹಲೆಗಳನ್ನು ನೀಡಿದರು. ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಎ ಟಿ ರಾಮಸ್ವಾಮಿ ಅವರು ಪರಿಸರ ರಕ್ಷಣೆ ಅಗತ್ಯವನ್ನು ಹೇಳಿ ಹಾಸನ ಜಿಲ್ಲೆಯ ಕಾರ್ಯಕರ್ಣಿ ಸಮಿತಿಗೆ ಚಾಲನೆ ನೀಡಿದರು.ಈ ಹಿನ್ನೆಲೆಯಲ್ಲಿ ನಾವು ಪರಿಸರ ರಕ್ಷಣೆಯ ಕಾರ್ಯ ಹಾಗೂ ಸಂಘಟನೆಯ ವಿಸ್ತಾರವನ್ನು ಒಟ್ಟೊಟ್ಟಿಗೆ ಮಾಡಬೇಕಾಗಿದೆ. ಪೂರ್ಣ ಮಟ್ಟದ ತಾಲೂಕು, ಹೋಬಳಿ ಸಮಿತಿ ರಚನೆಗಳನ್ನು ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಗಿಡ ನೆಡಲು ಸ್ಥಳವಕಾಶ ಮತ್ತು ಕಾಂಪೌಂಡ್ ಇರುವ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಹಾಗೂ ಇತರೆ ಪರಿಸರ ಅಸಕ್ತರ ಗುಂಪುಗಳ ಸಹಯೋಗದೊಂದಿಗೆ ಶಾಲೆಯ ಮಕ್ಕಳಿಗೆ ನಡೆಸುತ್ತಿರುವ ಬಿಸಿ ಊಟಕ್ಕೆ ಪೂರ್ಕವಾದಂತಹ ಮತ್ತು ಮಕ್ಕಳಿಗೆ ಉಪಯೋಗವಾಗುವ ಇತರ ಹಣ್ಣಿನ ಗಿಡಗಳನ್ನು ನೆಡುವ ಯೋಜನೆಗಳನ್ನು ’ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಜಿಲ್ಲೆ, ತಾಲೂಕು, ಮತ್ತು ಹೋಬಳಿ ಕೇಂದ್ರಗಳಲ್ಲಿ ಮಾಡಬಹುದು. ಶಾಲೆಯ ಅಗತ್ಯಕ್ಕೆ ತಕ್ಕಂತೆ ನುಗ್ಗೆ, ಹುಣಸೆ, ಹಲಸು, ನಲ್ಲಿ, ನೇರಳೆ ಮತ್ತು ಕರಿಬೇವು, ಚಕ್ಕೆ, ಲವಂಗ ಹಾಗೂ ಇತರ ಗಿಡಗಳನ್ನು ನೆಡಬಹುದು.     ಗಿರೀಶ್ ಆರ್ ಜಿ’ಪರಿಸರಕ್ಕಾಗಿ ನಾವು’ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಅರಸೀಕೆರೆ ಚಿಕ್ಕ ತಿರುಪತಿ ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಕೆ ಎಸ್ ಲತಾ ಕುಮಾರಿ ಭೇಟಿ..

ಅರಸೀಕೆರೆ : ಅರಸೀಕೆರೆ ನಗರ ಸಮೀಪವಿರುವ ರಾಜ್ಯದಲ್ಲೇ ಚಿಕ್ಕ ತಿರುಪತಿ ಎಂದು ಹೆಸರು ಪಡೆದಿರುವ ಶ್ರೀ ಅಮರಗಿರಿ ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ…

- Advertisement -
Ad image