
ಮಾಡಾಳು ಗ್ರಾಮದ ಕೆರೆ ಏರಿ ಮೇಲಿ ನೆಲೆಸಿರುವ ಗ್ರಾಮದ
ಆರಾಧ್ಯ ದೈವ ಶ್ರೀ ಗು ರು ಚನ್ನಬಸವೇಶ್ವರ ಸ್ವಾಮಿಯವ ಕಾರ್ತಿಕ ದೀಪೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು ನಮ್ಮಪೂರ್ವಜರು ಹಾಗೂ ಗುರುಹಿರಿಯರುಕಾರ್ತಿಕ ಮಾಸದಲ್ಲಿ ಭಕ್ತರೆಲ್ಲ ಸೇರಿ ದೇವಾಲ ಯಗ ಳಲ್ಲಿ ಹಣತೆಗಳನ್ನುಬೆಳಗಿಸಿಕೊಂಡು ಬರುತ್ತಿದ್ದರು ಸಂಪ್ರದಾಯದಂತೆ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲೂ ಸಹ ದೀಪುತ್ಸವ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿತ್ತು ದೇವಾಲಯವನ್ನು ತಳಿರು ತೋರಣ ಹಾಗೂ ಬಾಳೆ ಕಂದುಗಳಿಂದ ಶೃಂಗರಿಸಿದ್ದರೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ನೋಡುಗರ ಕಣ್ಮನ ಸೆಳೆಯಿತು ಮುಂಜಾನೆಯ ದೇವರಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ನ್ನು ಪುರೋಹಿತರು ಭಕ್ತರ ಸಮ್ಮುಖದಲ್ಲಿ ದಾರ್ಮಿಕ ವಿಧಿ ವಿಧಾನಗಳಿಂದ ನೆರವೇರಿಸಿದರು ದೇವಾಲಯದಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು ಇತ್ತ ಸಂಜೆಯಾಗುತ್ತಿದ್ದಂತೆ ಮಹಿಳೆಯರು ಹಾಗೂ ಯುವತಿಯರು ಹಣತೆಗಳಿಗೆ ಎಣ್ಣೆಬತ್ತಿ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು 8:30 ಕ್ಕೆ ಎಲೆಕದಲ್ಲಿ ಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಯಿತು ಈ ವೇಳೆ ದೀವಟಿಗೆ ಸಲಾಂಸಲ್ಲಿಸಿದ್ದು ಪೂಜಾ ಕಾರ್ಯಕ್ರಮಕ್ಕೆ ಮೆರಗು ನೀಡಿತುಮಹಾಮಂಗಳಾರತಿ ನಂತರ ಚನ್ನಬಸವೇಶ್ವರ ಸ್ವಾಮಿ ಭಕ್ತ ಮಂಡಳಿಯವರು
ಬಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಕಲ್ಪಿಸಿದ್ದರು ಪೂಜಾ ಕಾರ್ಯಕ್ರಮದಲ್ಲಿ ಮಾಡಾಳು ಗ್ರಾಮಸ್ಥರು ಸೇರಿದಂತೆ ವೈಜಿಹಳ್ಳಿ ಡಿ ಎಂ ಕುರ್ಕಿ ಸೀತಾಪುರ ಕೊಪ್ಪಲು ಪಿ ಹೊಸ ಹ ಳ್ಳಿ ಪಂಚನಹಳ್ಳಿಹೊಳಲ್ಕೆರೆ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು







