ರಾಜಕಾರಣ
ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಮ್ ರವರಿಗೆ ಎಲ್ಲಾ ಪತ್ರಕರ್ತರ ಸಂಘಟನೆಗಳ ಕಾರ್ಯಾಗಾರಕ್ಕೆ ಅನುದಾನ ಒದಗಿಸಲು ಮಹಾಒಕ್ಕೂಟ ಒತ್ತಾಯ :- ದಿನಾಂಕ 17-07-2025, ಗುರುವಾರ ಸಂಜೆ ಬೆಂಗಳೂರಿನಲ್ಲಿರುವ ರಾಜ್ಯದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಮಾನ್ಯ ಆಯೇಷಾ ಖಾನಮ್ ರವರನ್ನ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ಭೇಟಿ ಮಾಡಿ, ರಾಜ್ಯದ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಮ್ ರವರಲ್ಲಿ ಮನವರಿಕೆ ಮಾಡಲಾಗಿ, ಸಣ್ಣ-ಮಧ್ಯಮ ಮತ್ತು ದಿನಪತ್ರಿಕೆ (ಮಾಧ್ಯಮ ಪಟ್ಟಿಗೆ ಸೇರಿಲ್ಲದ) ಪತ್ರಿಕೆಗಳಿಗೆ ವಾರ್ಷಿಕ 2,00,000 (ಎರಡು ಲಕ್ಷರೂಗಳ ಪ್ರೋತ್ಸಾಹ ಜಾಹೀರಾತು) ರಾಜ್ಯ ವಾರ್ತಾ ಇಲಾಖೆಯಿಂದ ಕೊಡಿಸುವಂತೆ ಮನವಿ ಮಾಡಲಾಗಿ, ಈ ವಿಚಾರದ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕೆಂದು ಮಾನ್ಯ ಆಯೇಷಾ ಖಾನಮ್ ರವರಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದಿಂದ ಮನವಿ ಮಾಡಲಾಗಿ, ನಮ್ಮ ಮನವಿಗೆ ಸ್ಪಂಧಿಸಿದ ಮಾನ್ಯ ಆಯೇಷಾ ಖಾನಮ್ ರವರಿಗೆ ಧನ್ಯವಾದಗಳ ಜೊತೆಗೆ ತಮ್ಮ ಮಾಧ್ಯಮ ಅಕಾಡೆಮಿ ವತಿಯಿಂದ ಪತ್ರಕರ್ತರ ಕಾರ್ಯಗಾರಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೊಂದೇ ಅನುದಾನ ನೀಡುತ್ತಿದ್ದು ಇನ್ನು ಮುಂದೆ ಎಲ್ಲಾ ಪತ್ರಕರ್ತರ ರಾಜ್ಯ ಸಂಘಟನೆಗಳಿಗೆ ಅನುದಾನ ಹಂಚಿಕೆಯಾಗಿ ಕಾರ್ಯಗಾರಗಳು ನಡೆಸುವುದಕ್ಕೆ ತಾವುಗಳು ಅನುವು ಮಾಡಿಕೊಡಲೇಬೇಕೆಂದು ಒಕ್ಕೂಟ ಒತ್ತಾಯಿಸಿದ್ದಕ್ಕೆ ಎಲ್ಲಾ ಸಂಘಟನೆಗಳಿಗೂ ಅನುದಾನ ನೀಡುವುದಾಗಿ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಸಮ್ಮತಿ ಸೂಚಿಸಿದ್ದಾರೆ..
ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರು), ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶಿವಪ್ರಸಾದ್ ಜಿ…
ಅಧಿಕಾರಿಗಳು ಕೆಲಸ ಮಾಡುವುದನ್ನು ವಿಳಂಬ ಮಾಡಬೇಡಿ : ಜಿಲ್ಲಾಧಿಕಾರಿ ಲತಾ ಕುಮಾರಿ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಸ್.ಎಫ್.ಸಿ ಮತ್ತು 15ನೇ ಹಣಕಾಸಿನಲ್ಲಿ ಬಂದಿರುವ ಹಣವನ್ನು ಪೂರ್ಣಪ್ರಮಾಣದಲ್ಲಿ ವೆಚ್ಚ ಮಾಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಗರ ಸ್ಥಳೀಯ ಸಂಸ್ಥೆಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು ಕೆಲಸ ಮಾಡುವುದನ್ನು ವಿಳಂಬ ಮಾಡಬಾರದು ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು…
ಅರಸೀಕೆರೆ ನಗರಸಭೆಯಿಂದ ಮುಂದುವರೆದ ಸ್ವಾಗತ ಕಮಾನು ನಿರ್ಮಾಣ.
ಅರಸಿಕೆರೆಯ ಧಾರ್ಮಿಕ ಆದ್ಯಾತ್ಮಿಕ ಕೇಂದ್ರಗಳ ಬಗ್ಗೆ ಇತಿಹಾಸಗಳನ್ನು ತಿಳಿ ಹೇಳುವ ನಾಮಫಲಕ ಸ್ವಾಗತ ಕಮಾನುಗಳು ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ನಿರ್ಮಾಣಗೊಂಡು ಅರಸಿಕೆರೆ ನಗರದ ಅಂದವನ್ನು…
49 ಕರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಗಂಡಸಿ ಪೊಲೀಸರಿಂದ ಯಶಸ್ವಿ ಕಾರ್ಯಚಾರಣೆ.
ಗಂಡಸಿ ಪೊಲೀಸ್ ಠಾಣೆ ವತಿಯಿಂದ ಅರಸೀಕೆರೆ ಗಂಡಸಿ ಮಾರ್ಗದಲ್ಲಿ ಗಂಡಸಿ ಇಂದ ಹಿಂದೆ ದಾಸನಹಳ್ಳಿ ಗೇಟ್ ಹತ್ತಿರ ಶನಿಮಾ ದೇವಸ್ಥಾನದ ಹತ್ತಿರ ಮುಬಾರಕ್ ಎಂಬುವವರ ಶೆಡ್ಡಿನಲ್ಲಿ 49…
