ರಾಜ್ಯ

ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್‌ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ Siddaramaiah ಅವರು ಸಭೆ ನಡೆಸಿ, ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

. ಜಿಎಸ್‌ಟಿ ಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿಯಮಾವಳಿಗಳನ್ನು ಕೇಂದ್ರ ಸರ್ಕಾರವೇ ರಚಿಸಿದೆ. ಅವುಗಳ ಪಾಲನೆ ಮಾಡುವುದಷ್ಟೇ…

ಶ್ಯಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ  ಎಂ ಎಲ್ ಜಯರಾಮ ಅವಿರೋಧವಾಗಿ ಆಯ್ಕೆ..

ಅರಸೀಕೆರೆ ತಾಲೂಕಿನ  ಶಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಎಂ ಎಲ್ ಜಯರಾಮು ಅವಿರೋಧವಾಗಿ ಆಯ್ಕೆಯಾದರು ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ  ಹಾಗೂ ಹಿರಿಯ ರಾಜಕೀಯ ಮುಖಂಡರಾದ  ವಿಜಯಕುಮಾರ್  ರವರ ರಾಜೀನಾಮೆಯಿಂದ  ತೆರೆವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು ಚುನಾವಣೆ ಅಧಿಕಾರಿಗಳಾಗಿ ಅರಸೀಕೆರೆ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಸತೀಶ್ ಕಾರ್ಯನಿರ್ವಹಿಸಿದ್ದರು  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಶಾ. ಮಾಲಾ ಲಿಂಗರಾಜು. ಗಿರಿಯಪ್ಪ ಮಂಜಪ್ಪ. ಪುಷ್ಪಾ ಪ್ರದೀಪ್. ಮಮತಾ ಮಂಜುನಾಥ್. ಮರಿ ಸಂಕಪ್ಪ. ಮಂಜುನಾಥ್. ಮೇಲಪ್ಪಾ ಬಸಮ್ಮ ಶಾಂತಮ್ಮ ವನಜಾಕ್ಷಮ್ಮ   ಸೇರಿದಂತೆ ಶಾನೆಗೆರೆ  ಗ್ರಾಮ ಪಂಚಾಯಿತಿ ಎಲ್ಲಾ  ಸದಸ್ಯರುಗಳು ಉಪಸ್ಥಿತರಿದ್ದರು
ನೂತನ ಅಧ್ಯಕ್ಷರಿಗೆ ಅಭಿನಂದನೆ  ನೂತನ ಅಧ್ಯಕ್ಷರಾದ  ಎಂಎಲ್ ಜಯರಾಮ್ ರವರಿಗೆ  ಶಾನೆಗೆರೆ  ಅಭಿವೃದ್ಧಿ ಅಧಿಕಾರಿಗಳಾದ  ಧರ್ಮೇಂದ್ರ ಕುಮಾರ್. ಮತ್ತು ಶಿಕ್ಷಣ ಇಲಾಖೆಯ ಜಿಡಿ ಪರಮೇಶ್. ಹಿರಿಯ ರಾಜಕೀಯ ಮುಖಂಡರಾದ ಬೇವಿನಹಳ್ಳಿ ಮೋಕ್ಷರಾಜು. ಜೆಸಿಬಿ ರಾಜು  ಶುಭ ಹಾರೈಸಿದ್ದಾರೆ

*ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಗಳ ಸೌಲಭ್ಯ ವಿತರಣೆ ಪೂರ್ವಭಾವಿ ಸಭೆ.

.......ಅರಸೀಕೆರೆಬರುವ 26 ನೇ ತಾರೀಖಿನಂದು ಅರಸೀಕೆರೆ ನಗರಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಹಲವಾರು ಸಚಿವರೊಡನೆ ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಲಾಡ್ ರವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ…

ಲಕ್ಷ್ಮಿ ದೇವರ ಹಳ್ಳಿಯ ಶ್ರೀ ಅಮ್ಮನವರ ಆಷಾಢ ಮಾಸದ ವಿಶೇಷ ಪೂಜಾ ಕಾರ್ಯಕ್ರಮ.                               ಅರಸೀಕೆರೆ ತಾಲೂಕು ಸೂಳೆಕೆರೆ ಗೇಟ್ ಲಕ್ಷ್ಮಿ ದೇವರ ಹಳ್ಳಿಯ ಶ್ರೀ ಚೌಡೇಶ್ವರಿ ದೇವಿ ಯವರ ಆಷಾಢ ಮಾಸದ ವಿಶೇಷ ಪೂಜಾ ಕಾರ್ಯಕ್ರಮವು ಸೋಮವಾರ ಮತ್ತು ಮಂಗಳವಾರ ನಡೆಯುತ್ತಿದ್ದು ಇಂದು ಸಂಜೆ ರಾತ್ರಿ 8 ಗಂಟೆಗೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಇಂದು ದೇವಾಲಯದ ಶ್ರೀ ಗುರುವೇಗೌಡರ ವಂಶಸ್ಥರು ಹೊನ್ನೇನಳ್ಳಿ ಮತ್ತು ಲಕ್ಷ್ಮಿದೇವರಳ್ಳಿಯ ಗ್ರಾಮಸ್ಥರು ತಿಳಿಸಿದ್ದಾರೆ ಈ ಅದ್ದೂರಿ ಧಾರ್ಮಿಕ ಸಮಾರಂಭದಲ್ಲಿ ಅರಸೀಕೆರೆ ತಾಲೂಕಿನ ಕೆಜಿ ಅಗ್ರಹಾರ ಗ್ರಾಮದ ಕೆಂಚಪ್ಪ ದೇವರು ಚನ್ನರಾಯಪಟ್ಟಣದ ಶ್ರೀ ತಗ್ಯಮ್ಮ ದೇವಿ ಲಕ್ಷ್ಮಿ ದೇವರ ಅಳಿಯ ಕೆಂಚಪ್ಪ ಸ್ವಾಮಿ ಕೊಡಮ್ಮ ದೇವಿ ಕೆಜಿ ಅಗ್ರಹಾರ. ಹೊನ್ನೇನಹಳ್ಳಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ. ಲಕ್ಷ್ಮಿದೇವರ ಹಳ್ಳಿಯ ಶ್ರೀ ಲಕ್ಕಮ್ಮ ದೇವಿ ದೇವಿ ದೇವತೆಗಳು ಅದ್ದೂರಿ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲಿವೆ. ಸಂಜೆ ನಡೆಯುವ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಭಕ್ತಾದಿಗಳು ಪಾಲ್ಗೊಂಡು ದೇವರ ಭಕ್ತಿಯಲ್ಲಿ ತಲ್ಲೀನರಾಗಲಿದ್ದಾರೆ

ವರದಿ ಕೆ ಎನ್ ಮಂಜುನಾಥ್ ಕುಣಿಗಲ್