ಉಮೇಶ್ ಬಾಣಾವರ

ಉಮೇಶ್ ಬಾಣಾವರ

324 Articles

ಶ್ರೀ ಬಿ.ಬಿ.ಶಿವಪ್ಪ ರವರ ಪುಣ್ಯಸ್ಮರಣೆ ದಿನದಂದು ಗೌರವ ನಮನಗಳು….ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿರಿಯ ಬಿಜೆಪಿ ಮುಖಂಡರು ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಶ್ರೀ ಬಿಬಿ ಶಿವಪ್ಪನವರು,ಶ್ರೀ ಬಿ.ಬಿ.ಶಿವಪ್ಪ ಸೆಪ್ಟೆಂಬರ್ 27,1929 ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಜನಿಸಿದರು. ಅವರ ರಾಜಕೀಯ ಜೀವನವು ಕಾಂಗ್ರೆಸ್ಸಿನ ಕೆ.ಕಾಮರಾಜ್ ಮತ್ತುಮೊರಾರ್ಜಿದೇಸಾಯಿಯವರ ಆರಂಭಿಕ ಒಡನಾಟದಿಂದ ಪ್ರಾರಂಭವಾಯಿತು.ಬಿಜೆಪಿಗೆ ಸೇರಿದ ಶಿವಪ್ಪನವರು 1983ರಲ್ಲಿ ಎ.ಕೆ.ಸುಬ್ಬಯ್ಯನವರ ನಂತರ ಬಿಜೆಪಿ ಪಕ್ಷದ ಎರಡನೇ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. 1984 ರ ಅವಧಿಯಲ್ಲಿ, ಶಾಸಕಾಂಗದಿಂದ ವಿಧಾನಪರಿಷತ್ತಿಗೆ ಆಯ್ಕೆಯಾದರು ಮತ್ತು 1990 ರವರೆಗೆ ಸದನದ ಸದಸ್ಯರಾಗಿ ಮುಂದುವರೆದರು. ಬಿಜೆಪಿಯ ಅನುಭವಿ ಬಿ.ಬಿ. ಶಿವಪ್ಪನವರು ನಂತರ ಸಕಲೇಶಪುರದಿಂದ ಚುನಾವಣೆಗೆ ಸ್ಪರ್ಧಿಸಿದರು ಮತ್ತು 1994 ರಲ್ಲಿ ಮೊದಲ ಬಾರಿಗೆ ಆಯ್ಕೆಯಾದರು. ಅವರು 1999 ರಲ್ಲಿ ಮರು ಆಯ್ಕೆಯಾದರು ಮತ್ತು 2004 ರವರೆಗೆ ಸದಸ್ಯರಾಗಿ ಮುಂದುವರೆದರು88 ವರ್ಷದ ಶಿವಪ್ಪ ಅವರು ರಾಜ್ಯ ಬಿಜೆಪಿ ಘಟಕದ ಹಲವಾರು ಹಿರಿಯ ನಾಯಕರಿಗೆ ಮಾರ್ಗದರ್ಶಕರಾಗಿದ್ದರು ಮತ್ತು ಕರ್ನಾಟಕದಲ್ಲಿ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. 1980ರ ದಶಕದಲ್ಲಿ ಮಾಜಿ ಪಕ್ಷದ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರ ಉದಯಕ್ಕೂ ಮುನ್ನವೇ ರಾಜ್ಯದಲ್ಲಿ ಬಿಜೆಪಿ ಇನ್ನೂ ಉಗಮದ ಹಂತದಲ್ಲಿದ್ದಾಗ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿ ಶಿವಪ್ಪನವರಿಗೆ ಸಲ್ಲುತ್ತದೆ.ಕರ್ನಾಟಕ ಬಿಜೆಪಿ ಇತಿಹಾಸಕ್ಕೆ ಮೆರುಗು ಮತ್ತು ಶೋಭೆ ತಂದು ಕೊಟ್ಟವರು ಬಿ ಬಿ ಶಿವಪ್ಪನವರು ಇಂದಿನವರಂತೆ ಅವರು ಪಕ್ಷದಿಂದ ಏನೂ ಬಯಸಿದವರಲ್ಲ. ಪಕ್ಷ ಸಂಘಟನೆಗಾಗಿ ಮನೆ ಮಾರಿಕೊಂಡರಲ್ಲದೇ ತನು,ಮನ, ಧನವನ್ನು ಸಮರ್ಪಣೆ ಮಾಡಿದ ಸಜ್ಜನ ರಾಜಕಾರಣಿ. ಪಕ್ಷದ ವರಿಷ್ಠ ನಾಯಕರಾಗಿದ್ದ ಶ್ರೀ ದೀ ಅಟಲ್ ಬಿಹಾರಿ ವಾಜಪೇಯಿ ಅವರು ಹಾಗ ಕರ್ನಾಟಕಕ್ಕೆ ಬಂದರೆ ಉಳಿದುಕೊಳ್ಳುತ್ತಿದ್ದು ಬೆಂಗಳೂರಿನ ಶಾಂತಿನಗರದಲ್ಲಿದ್ದ ಶಿವಪ್ಪನವರ ಮನೆಯಲ್ಲೇ.ಬಿಜೆಪಿಯ ನಾಯಕರಾದ ವೆಂಕಯ್ಯನಾಯ್ಡು, ಅನಂತ್ ಕುಮಾರ್, ಯಡಿಯೂರಪ್ಪರಿಗೆ ಬಿಫಾರಂ ಕೊಟ್ಟಿದ್ದರು. ಪಕ್ಷದಿಂದ ಕೊಟ್ಟಿದ್ದ ಕಾರಿನಲ್ಲಿ ಶ್ರೀಯುತಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿಯವರನ್ನು ರಾಜ್ಯಾದ್ಯಂತ ಸುತ್ತಾಡಿಸಿದ್ದರು ಅವೆಲ್ಲವೂ ಇಂದು ಸವಿ ನೆನಪು ಮಾತ್ರ.

ವರದಿ : ಭರತ್ ಮಲ್ನಾಡ್

ಸಕಲೇಶಪುರ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಕಲೇಶಪುರ  : ರೋಟರಿ ಸಂಸ್ಥೆ ಸಕಲೇಶಪುರ ಹಾಗೂ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುಂಟಿಕಾನ, ಮಂಗಳೂರು ರವರ  ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ…

ರಸಗೊಬ್ಬರದ ಕೊರತೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ : ಹಾಸನ ನಗರದ ಕೃಷಿ ಜಂಟಿ ನಿರ್ದೇಶಕರ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆ :

ಬೇಡಿಕೆ ತಲುಪದ ಪೂರೈಕೆ

ಜಿಲ್ಲೆಯಲ್ಲಿ ಆಗಾಗ ‌ಸುರಿಯುತ್ತಿರುವ ಧಾರಾಕಾರ, ಸಾಧಾರಣ ಹಾಗೂ ಜಡಿಮಳೆಯು ಬಿತ್ತನೆ ಚಟುವಟಿಕೆಗೆ ಮತ್ತಷ್ಟು ಹುರುಪು ನೀಡಿದೆ. ಇದರ ಜೊತೆಗೆ ವಿವಿಧ ರಸಗೊಬ್ಬರಗಳಿಗೂ ರೈತರಿಂದ ಬೇಡಿಕೆ ಹೆಚ್ಚಾಗಿದೆ. ಆದರೆ, ಜಿಲ್ಲೆಗೆ ಬೇಡಿಕೆ ಇರುವಷ್ಟು ರಸಗೊಬ್ಬರವು ಸರಬರಾಜು ಆಗಿಲ್ಲ. ಕೆಲ ಗೊಬ್ಬರಗಳ ಕೊರತೆ ಎದುರಾಗಿದೆ.
ಕೇಂದ್ರ ಸರ್ಕಾರ ಸಮರ್ಪಕವಾಗಿ ನೀಡಿರುವ ರಸಗೊಬ್ಬರವನ್ನು ಸರಿಯಾಗಿ ರೈತರಿಗೆ ಹಂಚಿಕೆ ಮಾಡದ ರೈತವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಾಸನ ನಗರದ ಕೃಷಿ ಜಂಟಿ ನಿರ್ದೇಶಕರ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ಅನ್ಯಾಯವೆಸಗುತ್ತಿರುವ ರಾಜ್ಯ ಸರ್ಕಾರದ ಬೇಜವಾಬ್ದಾರಿತನವನ್ನು ಖಂಡಿಸಿ ರಾಜ್ಯ ಸರ್ಕಾರ ನಿರ್ಲಕ್ಷೆ ವಹಿಸದೆ ತಕ್ಷಣದಿಂದಲೇ ರೈತರು ಅನುಭವಿಸುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದರು.
ಪ್ರತಿಭಟನೆಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಕೆ ಸುರೇಶ್ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ರೈತ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರುಗಳು, ಇನ್ನಿತರ ಮುಖಂಡರು, ರೈತರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ: ಭರತ್ ಮಲ್ನಾಡ್

ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ನೂತನ ದೇವಾಲಯದ ಕಟ್ಟಡ ಕಾಮಗಾರಿಗೆ ಹಾರನಹಳ್ಳಿ ಸುಕ್ಷೇತ್ರ ಕೊಡಿ ಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಪಾದಪೂಜೆಯೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರಾವಣ ಪಂಚಮಿ ಸೋಮವಾರದಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋತ್ರವಾಗಿ ನೆರವೇರಿತು ಹಾರನಹಳ್ಳಿ ಕೋಡಿ ಮಠ ಮಹಾಸಂಸ್ಥಾನದ ವತಿಯಿಂದ ಜಗದ್ಗುರು ಡಾ ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರ ಸಂಕಲ್ಪದಂತೆ ಭಕ್ತರ ಸಮರ್ಪಣಾ ಮನೋಭಾವ ಹಾಗೂ ಆಶಯದಂತೆ ಸುಮಾರು ಅಂದಾಜು 1.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪೂಜಾ ವಿಧಿ ವಿಧಾನಗಳ ನಂತರ ಮಾತನಾಡಿದ ಶ್ರೀ ಗಳು ಸತ್ಯ ಶುದ್ಧ ಕಾಯಕದೊಂದಿಗೆ ಮನುಷ್ಯ ಜೀವನ ನಡೆಸಬೇಕು ಧರ್ಮ ಆಚರಣೆಯಿಂದ ವಿಮುಖನಾದರೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು ಶಾಂತಿ ನೆಮ್ಮದಿ ಸಮೃದ್ಧಿ ಬದುಕಿಗಾಗಿ ಧರ್ಮಾಚರಣೆ ಅಗತ್ಯ ಎಂದು ಸ್ವಾಮೀಜಿ ಪ್ರತಿಪಾದಿಸಿದರು. ಇಂದು ಎಲ್ಲಾ ರಂಗಗಳಲ್ಲಿ ಧಾರ್ಮಿಕ ಸಾಮಾಜಿಕ ಸಂಬಂಧಗಳು ಶಿಥಿಲಗೊಂಡು ಉಳಿಯುತ್ತಿಲ್ಲ ಆದ್ದರಿಂದ ಸತ್ಯದ ತಳಹದಿಯ ಮೇಲೆ ಹಾಗೂ ಸೈದ್ಧಾಂತಿಕ ನೆಲಗಟ್ಟಿನಡಿ ಗಟ್ಟಿಗೊಳಿಸಬೇಕಾಗಿದೆ ಅಂದುಕೊಂಡಂತೆ ಎಲ್ಲಾ ಕೆಲಸಗಳು ಆದರೆ ಕೋಡಿಮಠ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದಿನ ಶ್ರಾವಣದ ಪಂಚಮಿಯಂದು ನೂತನ ದೇವಾಲಯದಲ್ಲಿ ಸ್ವರ್ಣ ಗೌರಮ್ಮ ದೇವಿಯು ದರ್ಶನ ನೀಡುವಳು ಎಂದು ಹೇಳಿದರು. ಗೌರಮ್ಮ ದೇವಿಮೂಲ ಸನ್ನಿಧಿಯಲ್ಲಿ ಶ್ರೀಗಳವರ ಇಷ್ಟಲಿಂಗ ಪೂಜೆ ಮತ್ತು ಮುತ್ತೈದೆಯವರಸೇವೆಯನ್ನು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.

ಸಕಲೇಶಪುರ….ಅರಣ್ಯ ಇಲಾಖೆ ಮಿಂಚಿನ ಕಾರ್ಯಾಚರಣೆ : ಅಕ್ರಮ ಮರ ಸಾಗಾಟ ದಿಮ್ಮಿಗಳ ಸಮೇತ ವಾಹನ ವಶಸಕಲೇಶಪುರ: ಅಕ್ರಮ ಮರ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಮರದ ದಿಮ್ಮಿ ವಶಕ್ಕೆ ಪಡೆದ ಅರಣ್ಯ ಇಲಾಖೆಸಕಲೇಶಪುರ ತಾಲೂಕು ಯಡೆಹಳ್ಳಿ ಪ್ಲಾಂಟರ್ಸ್ ಕ್ಲಬ್ ಹತ್ತಿರ ಕಾಡು ಜಾತಿಯ ಬಿಲೆಟ್ಸ್ ಗಳನ್ನು ಅಕ್ರಮ ಸಾಗಾಟದಲ್ಲಿದ್ದ ಎರಡು ವಾಹನಗಳನ್ನು ಅರಣ್ಯ ಇಲಾಖೆ ವಾಹನ ಸಮೇತ ಮರದ ದಿಮ್ಮಿ ವಶಕ್ಕೆ ಪಡೆದಿದ್ದಾರೆ. KA 13 4225 ಹಾಗು ಮತ್ತೊಂದು ವಾಹನದಲ್ಲಿ ದಿಮ್ಮಿಗಳನ್ನು ವಶಪಡಿಸಿಕೊಂಡು ಸರ್ಕಾರಿ ನಾಟ -ಸಂಗ್ರಹಾಲಯಕ್ಕೆ ಸಾಗಿಸಲಾಗಿದೆ.

ಆರ್.ಎಫ್.ಓ ಹೇಮತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅರಣ್ಯಾಧಿಕಾರಿಗಳಾದ ಮಂಜುನಾಥ್. ಮಹಾದೇವಪ್ಪ. ಲೋಕೇಶ್ . ಜೈ ಸ್ವಾಮಿ ಇವರುಗಳ ತಂಡ ದಿಮ್ಮಿ ವಶಪಡಿಸುವಲ್ಲಿ ಯಶಸ್ವಿಯಾಗಿದೆ. ವರದಿ :ಭರತ್…

ಅಂಬೇಡ್ಕರ್ ಭವನ ಅಭಿವೃದ್ಧಿ ಹಾಗು ಮೂಲಭೂತ ಸೌಕರ್ಯದ ಸಭೆ.

ಸಕಲೇಶಪುರ : ನಗರದ ಸಮಾಜ ಕಲ್ಯಾಣ ಇಲಾಖೆ ಕಛೇರಿಯಲ್ಲಿ ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜು ರವರು ಅಂಬೇಡ್ಕರ್ ಭವನದ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಸಭೆ…

ಮಳೆ ಅವಘಡ:ಸೂರಿಗಾಗಿ ಅಂಗಲಾಚುತ್ತಿರುವ ಕುಟುಂಬಗಳಿಗೆ ಪರಿಹಾರ ಮತ್ತು ನಿವೇಶನಕ್ಕೆ ಒತ್ತಾಯ..

ಸಕಲೇಶಪುರ : ಬಾರಿ ಮಳೆ ಗಾಳಿಗೆ ಬಡ ಕುಟುಂಬಗಳು ಸೂರಿಗಾಗಿ ಅಂಗಲಾಚುತ್ತಿವೆ. ಮಲೆನಾಡು ಭಾಗದ ಜನರ ಜೀವನ ಅಸ್ತವ್ಯಸ್ತ. ಸಕಲೇಶಪುರ ತಾಲ್ಲೂಕು ಯಶಳೂರು ಹೋಬಳಿಯ ಬಾಣಗೆರೆ ಗ್ರಾಮದಕವಿತಾ…

- Advertisement -
Ad image