, ಈ ದಿವಸ ದಿನಾಂಕ 04-06-2026 ರಂದು ಚಿಕ್ಕಮಗಳೂರಿನಲ್ಲಿನ ಕಾಫೀ ತೋಟಗಳು ಮತ್ತು ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳಿಗೆ ಬಾಲಕಾರ್ಮಿಕ ನಿರ್ಮೂಲನೆಗಾಗಿ ಅನಿರೀಕ್ಷಿತ ಧಾಳಿ ನಡೆಸಲಾಯ್ತು. ಪೀಸ್ ಹೋಂ ಸ್ಟೇ, ಹಳೇಬಾಳೆಹಳ್ಳಿ ಮುಳ್ಳಯ್ಯನಗಿರಿ ರಸ್ತೆ, ಚಿಕ್ಕಮಗಳೂರು ನಲ್ಲಿ 01 ಬಾಲ ಕಾರ್ಮಿಕ, 01 ಕಿಶೋರ ಕಾರ್ಮಿಕರನ್ನು ರಕ್ಷಣೆಗೊಳಿಸಿ ಬಾಲ ಮಂದಿರ (CWC)ಗೆ ಹಾಜರುಪಡಿಸಲಾಗಿದೆ. ಈ ಸಂದರ್ಭದಲ್ಲಿ. ಸಹಾಯಕ ಕಾರ್ಮಿಕ ಆಯುಕ್ತರು, ಚಿಕ್ಕಮಗಳೂರು,ಕಾರ್ಮಿಕ ಅಧಿಕಾರಿಯವರು, ಚಿಕ್ಕಮಗಳೂರು,ಹಿರಿಯ ಕಾರ್ಮಿಕ ನೀರೀಕ್ಷಕರು 1&2ನೇ ವೃತ್ತ,ಚಿಕ್ಕಮಗಳೂರು ಹಾಗೂ ಜಿಲ್ಲಾ ಮಕ್ಕಳರಕ್ಷಣಾ ಘಟಕದ ಕೌನ್ಸಿಲರ್ ಹಾಜರಿದ್ದರು. ತೋಟದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರುಗಳಿಗೆ ಹಾಗೂ ಮಾಲೀಕರುಗಳಿಗೆ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅರಿವು ಮೂಡಿಸಲಾಯಿತು.
