ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಸ್ಥೆಯ ರಾಜ್ಯ ಸಮಿತಿ ಸಭೆ ಇತ್ತೀಚಿಗೆ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ನಡೆದು ಈ ಕಚೇರಿಯಲ್ಲಿ ರಾಜ್ಯ ಸಮಿತಿ ಸಭೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಈ ಸಭೆಯಲ್ಲಿ ಬೆಂಗಳೂರಿನ ಉತ್ತರ ಜಿಲ್ಲೆಗೆ ಅಮೃತ ಹಳ್ಳಿ ಹೆಬ್ಬಾಳ ಗುರುಮೂರ್ತಿಯವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದ್ದು ಗುರುಮೂರ್ತಿಯವರ ಅಪಾರ ಅಭಿಮಾನಿಗಳು ಮತ್ತು ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು ಶುಭ ಹಾರಯಿ ಸಿದ್ದಾರೆ
ಬೆಂಗಳೂರು ಉತ್ತರ ಜಿಲ್ಲೆಯ ಅಮೃತ ಹಳ್ಳಿ ಹೆಬ್ಬಾಳ ಗುರುಮೂರ್ತಿಯವರು ಅಭಿನಯ ಟೈಲರ್ ಎಂದೇ ಪ್ರಸಿದ್ಧಿ ಹೊಂದಿದ್ದು ಇವರನ್ನು ಆಯ್ಕೆ ಮಾಡಿರುವ ರಾಜ್ಯ ಟೈಲರ್ ಸಂಸ್ಥೆಯಾ ಪದಾಧಿಕಾರಿಗಳಿಗೆ ಸಮಾಜ ಸೇವೆಯನ್ನು ಗುರುತಿಸಿ ಮತ್ತು ಸಂಘಟನೆಯ ಚತುರತೆಯನ್ನು ಗುರುತಿಸಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಸ್ಥೆ ಹೆಬ್ಬಾಳ ಗುರುಮೂರ್ತಿಯ ರವರನ್ನು ಗುರುತಿಸಿರುವುದು ಸಂತೋಷದ ಸಂಗತಿ ಎಂದು ಅಪಾರ ಅಭಿಮಾನಿಗಳು ತಿಳಿಸಿದ್ದಾರೆ








