ರಾಜ್ಯ

ಜಿಲ್ಲಾ ಕಾರ್ಯಕಾರ್ಣಿ ಸಮಿತಿಯ ಮೊದಲ ಸಭೆಯ ಸಂಕ್ಷಿಪ್ತ ವರದಿ’ಪರಿಸರಕ್ಕಾಗಿ ನಾವು’ ಕರ್ನಾಟಕ ರಾಜ್ಯ ಸಂಘಟನೆಯ ಹಾಸನ ಜಿಲ್ಲಾ ಕಾರ್ಯಕಾರ್ಣಿ ಸಮಿತಿಯ ಸಭೆಯು ದಿನಾಂಕ 12/07/2025ರ ಶನಿವಾರದಂದು ಅರಕಲಗೂಡು ತಾಲೂಕು, ಕೊಣ್ಣನೂರು ಹೋಬಳಿ, ಬಿಸಿಲಹಳ್ಳಿ ಗ್ರಾಮದಲ್ಲಿ ಪರಿಸರಕ್ಕಾಗಿ ರಾಜ್ಯ ಸಂಘಟನೆ ಅಧ್ಯಕ್ಷರಾದ ಶ್ರೀ ಎ ಟಿ ರಾಮಸ್ವಾಮಿ ಅವರ ಮನೆಯಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಭೆಯಲ್ಲಿ ’ಪರಿಸರಕ್ಕಾಗಿ ನಾವು’ ಸಂಘಟನೆಯ ಒಟ್ಟು 43 ಕಾರ್ಯಕರ್ತರು ಭಾಗವಹಿಸಿದ್ದರು. ಸಂಘಟನೆಯ ರಾಜ್ಯ ಅಧ್ಯಕ್ಷರು ಶ್ರೀ ಎ ಟಿ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀ ಪರಶುರಾಮೇಗೌಡ, ಸಂಘಟನಾ ಕಾರ್ಯದರ್ಶಿ ಮಮತಾ ರಾಣಿ ಎಸ್ ಎನ್, ಹಾಸನ ಜಿಲ್ಲಾ ಸಮಿತಿಯ 16 ಪದಾಧಿಕಾರಿಗಳು, ’ಪರಿಸರಕ್ಕಾಗಿ ನಾವು’ ಸಂಘಟನೆಯ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳ 15 ಹಾಗೂ ಮೈಸೂರು ಜಿಲ್ಲೆಯ 7 ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಪರಿಸರ ರಕ್ಷಣೆಗಾಗಿ ನಡೆದ ವಿಸ್ತೃತವಾಗಿ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಲಹಲೆಗಳನ್ನು ನೀಡಿದರು. ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಎ ಟಿ ರಾಮಸ್ವಾಮಿ ಅವರು ಪರಿಸರ ರಕ್ಷಣೆ ಅಗತ್ಯವನ್ನು ಹೇಳಿ ಹಾಸನ ಜಿಲ್ಲೆಯ ಕಾರ್ಯಕರ್ಣಿ ಸಮಿತಿಗೆ ಚಾಲನೆ ನೀಡಿದರು.ಈ ಹಿನ್ನೆಲೆಯಲ್ಲಿ ನಾವು ಪರಿಸರ ರಕ್ಷಣೆಯ ಕಾರ್ಯ ಹಾಗೂ ಸಂಘಟನೆಯ ವಿಸ್ತಾರವನ್ನು ಒಟ್ಟೊಟ್ಟಿಗೆ ಮಾಡಬೇಕಾಗಿದೆ. ಪೂರ್ಣ ಮಟ್ಟದ ತಾಲೂಕು, ಹೋಬಳಿ ಸಮಿತಿ ರಚನೆಗಳನ್ನು ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಗಿಡ ನೆಡಲು ಸ್ಥಳವಕಾಶ ಮತ್ತು ಕಾಂಪೌಂಡ್ ಇರುವ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಹಾಗೂ ಇತರೆ ಪರಿಸರ ಅಸಕ್ತರ ಗುಂಪುಗಳ ಸಹಯೋಗದೊಂದಿಗೆ ಶಾಲೆಯ ಮಕ್ಕಳಿಗೆ ನಡೆಸುತ್ತಿರುವ ಬಿಸಿ ಊಟಕ್ಕೆ ಪೂರ್ಕವಾದಂತಹ ಮತ್ತು ಮಕ್ಕಳಿಗೆ ಉಪಯೋಗವಾಗುವ ಇತರ ಹಣ್ಣಿನ ಗಿಡಗಳನ್ನು ನೆಡುವ ಯೋಜನೆಗಳನ್ನು ’ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಜಿಲ್ಲೆ, ತಾಲೂಕು, ಮತ್ತು ಹೋಬಳಿ ಕೇಂದ್ರಗಳಲ್ಲಿ ಮಾಡಬಹುದು. ಶಾಲೆಯ ಅಗತ್ಯಕ್ಕೆ ತಕ್ಕಂತೆ ನುಗ್ಗೆ, ಹುಣಸೆ, ಹಲಸು, ನಲ್ಲಿ, ನೇರಳೆ ಮತ್ತು ಕರಿಬೇವು, ಚಕ್ಕೆ, ಲವಂಗ ಹಾಗೂ ಇತರ ಗಿಡಗಳನ್ನು ನೆಡಬಹುದು.     ಗಿರೀಶ್ ಆರ್ ಜಿ’ಪರಿಸರಕ್ಕಾಗಿ ನಾವು’ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಅರಸೀಕೆರೆ ಚಿಕ್ಕ ತಿರುಪತಿ ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಕೆ ಎಸ್ ಲತಾ ಕುಮಾರಿ ಭೇಟಿ..

ಅರಸೀಕೆರೆ : ಅರಸೀಕೆರೆ ನಗರ ಸಮೀಪವಿರುವ ರಾಜ್ಯದಲ್ಲೇ ಚಿಕ್ಕ ತಿರುಪತಿ ಎಂದು ಹೆಸರು ಪಡೆದಿರುವ ಶ್ರೀ ಅಮರಗಿರಿ ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ…

49 ಕರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಗಂಡಸಿ ಪೊಲೀಸರಿಂದ ಯಶಸ್ವಿ ಕಾರ್ಯಚಾರಣೆ.

ಗಂಡಸಿ ಪೊಲೀಸ್ ಠಾಣೆ ವತಿಯಿಂದ ಅರಸೀಕೆರೆ ಗಂಡಸಿ ಮಾರ್ಗದಲ್ಲಿ ಗಂಡಸಿ ಇಂದ ಹಿಂದೆ ದಾಸನಹಳ್ಳಿ ಗೇಟ್ ಹತ್ತಿರ ಶನಿಮಾ ದೇವಸ್ಥಾನದ ಹತ್ತಿರ ಮುಬಾರಕ್ ಎಂಬುವವರ ಶೆಡ್ಡಿನಲ್ಲಿ 49…

“ಸದಾ ಜನಪರ ಕಾಳಜಿಯ ಶಾಸಕರು” ಮತ್ತು”ವಿಶೇಷ ಚೇತನನ ವಿಶಿಷ್ಟ ಕಾಳಜಿ”

ಕ್ಷೇತ್ರದ ಕಾರ್ಯಕ್ರಮ ನಿಮಿತ್ತ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಮಾರ್ಗಮಧ್ಯೆ ವಿಶೇಷ ಚೇತನ “ಜಯರಾಮ್”  ಅವರನ್ನು ಆಕಸ್ಮಿಕವಾಗಿ
ಭೇಟಿ ಮಾಡಿದ ಸನ್ಮಾನ್ಯ  ಶಾಸಕರಾದ ಶ್ರೀ ಯುತ  ಸಿಮೆಂಟ್ ಮಂಜು, ಸಕಲೇಶಪುರ ವಿಧಾನಸಭಾ ಕ್ಷೇತ್ರ,ಕುಸಾಲೋಪಾರಿ ವಿಚಾರಿಸುತ್ತಾ
ಅಂಗವೈಕಲ್ಯತೆ ಇದ್ದರೂ ಸಹ ಇವರ ಜೀವನೋತ್ಸಾಹ ನೋಡಿ  ಮನ ಸೋತು, ಸರ್ಕಾರದ ಸೌಲಭ್ಯಗಳ ಏನಾದರು ಬೇಕೆ ಎಂಬ ಪ್ರಶ್ನೆಗೆ ? “ನಮ್ಮೂರಿನ ರಸ್ತೆ ನಿರ್ಮಾಣ ಮಾಡಿಕೊಡಿ” ಎಂಬುದು ಅವರ ಉತ್ತರ !
ಜಯರಾಮ್ ರವರು ಶನಿವಾರಸಂತೆಯ ಗಂಗಾವಾರ ಗ್ರಾಮದ ನಿವಾಸಿ (ಮಡಿಕೇರಿ ವಿಧಾನಸಭಾ ಕ್ಷೇತ್ರ) ಇವರ ಬೇಡಿಕೆಯನ್ನು ಸದ್ಯದಲ್ಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ
  ಶಾಸಕರಾದ ಶ್ರೀ ಯುತ  ಮಂತರ್ ಗೌಡ , ಅವರ ಗಮನಕ್ಕೆ ತರುವ ಭರವಸೆ ನೀಡಿದರು.

ವರದಿ : ಭರತ್ ಮಲ್ನಾಡ್