ಸಕಲೇಶಪುರ ತಾಲ್ಲೂಕು ವರ್ತಕರ ಸಂಘದ ನೂತನ ಭವನದ ಶಿಲನ್ಯಾಸವನ್ನು ಸಂಘದ ಅಧ್ಯಕ್ಷರಾದ ಶ್ರೀಯುತ ಬಿ ಎಂ ಮಧು ಕುಮಾರ್ ಇವರ ನೇತೃತ್ವದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ತಾಲೂಕು ವರ್ತಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಯುತ ಹೆಚ್ ಎಚ್ ಉದಯ್ ಹಾಗೂ ವರ್ತಕರ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಜವಹರ್ಲಾಲ್ ಜೈನ್, ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣಣ್ಣ ಮತ್ತು ಉಪಾಧ್ಯಕ್ಷರಾದ ರೆಹಮಾನ್ ರವರು, ಸಂಘದ ಖಜಾಂಚಿಗಳಾದ ಎಸ್ ಪಿ ಸತ್ಯನಾರಾಯಣ,ಸಹ ಕಾರ್ಯದರ್ಶಿಗಳಾದ ಎ ಸಿ ರವಿಶಂಕರ್, ಬಿ ಜಿ ಲೋಹಿತ್, ಜೆ ಸಿ ರಾಘವೇಂದ್ರ, ಹಾಗೂ ಇದರ ಪದಾಧಿಕಾರಿಗಳು ಮತ್ತು ನಿರ್ದೇಶಕರು , ಮತ್ತು ಎಸ್ ಪಿ ಓಸ್ವಾಲ್ ಅಂಡ್ ಕಂ ಮಾಲಿಕರಾದ ಭರತ್ ಜೈನ್ ದಂಪತಿಗಳು ಹಾಗೂ ಕೆಲವು ಗಣ್ಯರು ಹಾಜರಿದ್ದು ಶುಭ ಹಾರೈಸಿದರು.

