ಸಚಿವ ಸ್ಥಾನಕ್ಕಾಗಿ ಒತ್ತಾಯ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ನಗರಸಭಾ ಮಾಜಿ ಸದಸ್ಯ ವೆಂಕಟಮುನಿ ನೂತನ ಕೆಪಿಸಿಸಿ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್, ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಮೀರ್ ಅಹ್ಮದ್ ಹಾಗೂ ಕೆಎಂ ಶಿವಲಿಂಗೇಗೌಡರಿಗೆ ಮುಂದಿನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು
ಅರಸೀಕೆರೆ ಶಾಸಕರು ಸತತ ನಾಲ್ಕು ಬಾರಿ ಜಯಗಳಿಸಿ ಅರಸೀಕೆರೆ ಕ್ಷೇತ್ರವನ್ನ ಮಾದರಿ ಮಾದರಿ ಕ್ಷೇತ್ರವಾಗಿಸಲು ಸತತ ಪ್ರಯತ್ನ ಪಡುತ್ತಿರುವ ಜಿಲ್ಲೆಯ ಏಕೈಕ ಶಾಸಕ ಕೆಎಂ ಶಿವಲಿಂಗೇಗೌಡರನ್ನ ಮಂತ್ರಿ ಸ್ಥಾನ ನೀಡುವುದು ನ್ಯಾಯ ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ನೀಡಲಿ ಎಂದು ಮಾಜಿ ನಗರಸಭಾ ಸದಸ್ಯ ಬಾಲಮುರುಗನ್ ಆಗ್ರಪಡಿಸಿದರು
ಸಭೆ ಉದ್ದೇಶಿಸಿ ಮಾತನಾಡಿದ ಜಿಎನ್ ಸುಬ್ರಹ್ಮಣ್ಯ ಬಾಬು ನೂತನ ಮುಖ್ಯಮಂತ್ರಿ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜಮೀರ್ ಅಹ್ಮದ್ ಹಾಗೂ ಕೆಎಂ ಶಿವಲಿಂಗೇಗೌಡರನ್ನ ಯಾವ ಕಾರಣಕ್ಕೆ ಕೈ ಬಿಟ್ಟಿದ್ದಾರೆಗೊತ್ತಿಲ್ಲ ಆದರೆ ಜನತೆಯ ನಿರೀಕ್ಷೆ ಉಸಿಯಾಗಿದೆ ಕರ್ನಾಟಕ ರಾಜ್ಯದಲ್ಲಿ ಪಕ್ಷಾತೀತ ಜಾತ್ಯತೀತ ಧರ್ಮತೀರ್ಥವಾಗಿ ಸಹಾಯ ಹಸ್ತ ನೀಡುತ್ತಾ ಕೊಡೆಗೈ ದಾನಿಯಾಗಿ ಮಾಜಿ ವಸತಿ ಸಚಿವರು ಜಮೀರ್ ಅಹ್ಮದ್ ಜನಮನದಲ್ಲಿ ಉಳಿದಿದ್ದಾರೆ ರಾಜ್ಯದಲ್ಲಿ ಅಲ್ಪಸಂಖ್ಯಾತ ಜನತೆ ಸಚಿವ ಸ್ಥಾನ ತಪ್ಪಿರುವುದಕ್ಕೆ ಸಮಾಜದಲ್ಲಿ ದಿಗ್ಭ್ರಮಣೆ ಉಂಟಾಗಿ ಅತಿವ ಆಕ್ರೋಶ ವ್ಯಕ್ತವಾಗಿದೆ,
ಉಪಮುಖ್ಯಮಂತ್ರಿಯಾಗಿ ನೋಡುವ ಆಸೆ ಹೊಂದಿದ್ದ ಜನತೆ ರಾಜ್ಯಾದ್ಯಂತ ಪ್ರತಿಭಟನೆ ಒತ್ತಾಯ ನಡೆಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತ ಜನತೆಯಲ್ಲಿ ವಿಶ್ವಾಸ ಮೂಡಿಸಲು ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನ ನೀಡಬೇಕೆಂದು ಒತ್ತಾಯಿಸಿದರು
ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೆಎಂ ಶಿವಲಿಂಗ ಗೌಡರನ್ನ ನೋಡಲು ಬಯಸಿದ್ದ ಜನತೆಗೆ ಅತೀವ ನಿರಾಸೆ ಉಂಟಾಗಿದ್ದು ಸತತ ನಾಲ್ಕು ಬಾರಿ ಶಾಸಕರಾಗಿ ಅಭಿವೃದ್ಧಿ , ಜನ ಉಪಯೋಗ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಾ ಇಡೀ ಕ್ಷೇತ್ರದಲ್ಲಿ ಸಾವಿರಾರು ದೇವಸ್ಥಾನ, ಎತ್ತಿನಹೊಳೆ ಯೋಜನೆಯಿಂದಕೆರೆಗಳಿಗೆ ನೀರನ್ನು ತುಂಬಿಸುತ್ತಿರುವ ಸಲುವಾಗಿಶಾಸಕರಿಗೆ ಹಾಗೂ ಸತತ ನಾಲ್ಕು ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಈಗ ಮಂತ್ರಿ ಸ್ಥಾನ ಲಭಿಸಿ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ಬಂದಂತ ನಮ್ಮ ಜನಪ್ರಿಯ ಕೆಎಂ ಶಿವಲಿಂಗೇಗೌಡರನ್ನು ಮಂತ್ರಿ ಸ್ಥಾನ ನೀಡಬೇಕೆಂದು ಜನತೆ ಒತ್ತಾಯಿಸುತ್ತಿದೆ ಯಾವುದೇ ಕಾರಣಕ್ಕೂ ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮಾಜದ ಆಶಾಕಿರಣ ಬಿ ಝೆಡ್ ಝಮೀರ್ ಅಹ್ಮದ್ ರವರನ್ನು ಉಪಮುಖ್ಯಮಂತ್ರಿಯಾಗಿ, ಕೆಎಂ ಶಿವಲಿಂಗೇಗೌಡರನ್ನ ಹಾಸನ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಆಯ್ಕೆ ಮಾಡಬೇಕೆಂದು ಜನತೆಯ ಪರವಾಗಿ ಇಂದು ಅರಸೀಕೆರೆಯಲ್ಲಿ ಒತ್ತಾಯಿಸಲಾಗಿದೆ ಎಂದರು

Share This Article
Leave a Comment

Leave a Reply

Your email address will not be published. Required fields are marked *