
ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಮೂಗುತಿ ಸುಂದರಿ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗು ರು ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಯರಸಾನಿಧ್ಯದಲ್ಲಿ 11 ಸಹಸ್ರ ದೀಪುತ್ಸ ವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ಅದ್ದೂರಿಯಾಗಿ ವಿಜೃಂಭಣೆಯಿಂದ ಜರುಗಿತು ಗ್ರಾಮದ ಹೊರಬಾಗದ ಶಿವ ಬಸವ ಕಮಾಶ್ರಮ ರಸ್ತೆಬದಿ ಯರುವ ದೇವಾಲಯದಲ್ಲಿ ಲೋ ಕಕಲ್ಯಾ ಣಾರ್ಥವಾಗಿ , ಶ್ರೀಗಳಕಲ್ಪದಂತ 2
ನೇವರ್ಷ ದದೀಪೋತ್ಸವ ಕಾರ್ಯ ಕ್ರಮವನ್ನು ದೀಪಬೆಳೆಗಿಸುವುದರ ಮೂಲಕ ಸ್ವಾಮೀಜಿಯ ವರು ಚಾಲನೆ ನೀಡಿದರು ಇತ್ತ ಶ್ರೀನಳು ಹಣತೆ ಬೆಳಗಿಸುತ್ತಿದ್ದಂತೆ ನೂರಾರು ಮಹಿಳೆ ಯರುಯುವಕ ಯುವತಿಯರುಸಡಗರ ಸಂಭ್ರಮದಿಂದಸರತಿ ಸಾಲಿನಲ್ಲಿ ಜೋಡಿಸಿಟ್ಟಿದ್ದ ಹಣತೆಗಳನ್ನು ಹಚ್ಚುತ್ತಿದ್ದ ದೃಶ್ಯ ನಯನ ಮನೋ ಹರವಾಗಿತ್ತು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಕತ್ತಲೆಯನ್ನು ಕಳೆಯಲು ಸೂರ್ಯ ಚಂದ್ರ ದೀಪ ಬೇಕು ಹಾಗೆಯೇ ಮನುಷ್ಯನಮನದಲ್ಲಿರುವ ಅಜ್ಞಾನ ಮತ್ತು ಅಂಧಕಾರವನ್ನು ಓಡಿಸಲು ಗುರುಗಳ ಕಾರುಣ್ಯ ಅಗತ್ಯ ಎಂದು ಹೇಳಿದರು
ಕಡೆ ಕಾರ್ತಿಕ ಪೂಜೆಯ ಅಂಗವಾಗಿ ದೇವಾ ಲಯವನ್ನು ತಳಿರು ತೋರಣ ಬಾಳೆಕಂದಗಳಿಂದ ಶೃಂಗರಿಸಿದ್ದರೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿ ನೋಡುಗರ ಕಣ್ಮನ ಸೆಳೆಯಿತು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಮಹತಪಸ್ವಿ ಶ್ರೀ ಶಿವಲಿಂಗ ಜ್ಜಯ್ಯ ಮೂರ್ತಿಗೆ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸ ವೇಶ್ವರ ಸ್ವಾಮಿಯವರ ಸಮ್ಮುಖದಲ್ಲಿ ಪುರೋಹಿತರಿಂದ ಹವನ ಹೋಮ ಧಾರ್ಮಿಕಪೂಜಾ ಕಾರ್ಯಕ್ರಮಗಳು ಭಕ್ತರ ಶ್ರದ್ಧಾ ಭಕ್ತಿಯಿಂದ ನೆರವೇರಿತು ಸಂಜೆ 8:30 ಕ್ರೆ ಸರಿಯಾಗಿಶ್ರೀಗಳ ಪಾದಪೂಜೆಯೊಂದಿಗೆ ಅಮ್ಮನವರಿಗೆ ಕರ್ಪೂರದಾರತಿ ಸಲ್ಲಿಸಲಾಯಿತು ನಂತರ ಬಂದ ಭಕ್ತಾದಿಗಳಿಗೆ ಕೋಡಿಮಠ ಮಹಾಸಮ ಸ್ಥಾನದ ವತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು ರಾಂಪುರ ಶ್ರೀ ನಿರ್ಮಾಣ ಸಿದ್ದೇಶ್ವರ ಭಜನಾ ಮಂಡಳಿ ತಂಡದವರಿಂದ ಭಜನೆ ನಡೆಯಿತು







