

ಕರ್ನಾಟಕ ರಕ್ಷಣಾ ವೇದಿಕೆ ಅರಸೀಕೆರೆ ತಾಲ್ಲೊಕು ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಪಿಪಿ ವೃತ್ತದಲ್ಲಿ ವೈಭವವಾಗಿ ಆಚರಣೆ ಮಾಡಲಾಯಿತು ನೂತನ ಧ್ವಜಸ್ತಂಭವನ್ನು ಉದ್ಘಾಟಿಸಿ ಮತ್ತು ಧ್ವಜಾರೋಹಣ ಕೆಎಂ ಶಿವಲಿಂಗೇಗೌಡ ಶಾಸಕರು ನೆರವೇರಿಸಿದರು.
ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ ನಗರಸಭೆ ಉಪಾಧ್ಯಕ್ಷ ಮನೋಹರ್, ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಅರುಣ್ ಕುಮಾರ್, ನಗರಸಭಾ ಸದಸ್ಯ ವೆಂಕಟ ಮುನಿ, ತಾಲೂಕ್ ಕರವೇ ಅಧ್ಯಕ್ಷ ಎ.ಜಿ. ಕಿರಣ್ ಕುಮಾರ್ , ನಗರ ಅಧ್ಯಕ್ಷ ಸಂತೋಷ್, ತಾಲೂಕು ಉಪಾಧ್ಯಕ್ಷ ಗಂಗಾಧರ ನಾಯಕ್, ಗೌರವಾಧ್ಯಕ್ಷ ಲಕ್ಷ್ಮೀಶ್, ಜಿಲ್ಲಾ ಉಪಾಧ್ಯಕ್ಷ ತುಳಸಿ ದಾಸ್, ಹೋಬಳಿ ಅಧ್ಯಕ್ಷ ಪರಮೇಶ್, ಮಹಿಳಾ ಅಧ್ಯಕ್ಷರು ಕಮಲಮ್ಮ, ರುಕ್ಮಿಣಿ, ಉಷಾ, ಖಜಾಂಚಿ ರಾಘವೇಂದ್ರ, ಕಾರ್ಮಿಕರ ಅಧ್ಯಕ್ಷ ಮಂಜುನಾಥ್, ತಾಲೂಕು ಉಪಾಧ್ಯಕ್ಷ ನವೀನ್ ಕರಗುಂದ, ಅರ್ಜುನ್ ಗೌಡ,ನೇತ್ರೇಶ್, ಕೊಪ್ಪಲು ರಾಜು, ಆಪಲ್ ಮಂಜು,ನಾಸಿರ್, ಪರ್ವೇಜ್ , ಮುಂತಾದವರು ಇದ್ದರು







