.10 ಸಕಲೇಶಪುರದಲ್ಲಿ ಇ ಪೌತಿ ಖಾತೆ ಆಂದೋಲನ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಸೆ.10 ಸಕಲೇಶಪುರದಲ್ಲಿ ಇ ಪೌತಿ ಖಾತೆ ಆಂದೋಲನ
ಸಕಲೇಶಪುರ: ಕೃಷಿ ಜಮೀನಿನ ಮಾಲಿಕರು ಮರಣ ಹೊಂದಿದ ನಂತರ ಪೌತಿ / ವಾರಸಾ ರೀತ್ಯ ಮಾಲಿಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಆಗದಿದ್ದಲ್ಲಿ ಅಂತಹಾ ಜಮೀನುಗಳ ಪೌತಿ / ವಾರಸಾ ಸ್ವರೂಪದ ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸುವ ಉದ್ದೇಶದಿಂದಾಗಿ ಕರ್ನಾಟಕ ಸರ್ಕಾರ ಇ ಖಾತೆ ಆಂದೋಲನ ಹಮ್ಮಿಕೊಂಡಿದೆ.
ಈ ಸಂಬಂಧ ಸಕಲೇಶಪುರ ತಾಲೋಕು ವ್ಯಾಪ್ತಿಯಲ್ಲಿ ದಿನಾಂಕ : 10-09 – 20 25 ರಂದು ಪೌತಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು ಮರಣ ಹೊಂದಿದ ಖಾತೆದಾರರ ಕುಟುಂಬಸ್ಥರು ಇಪೌತಿ ಖಾತೆ ಬದಲಾವಣೆಗೆ ತಮ್ಮ ತಮ್ಮ ಹೋಬಳಿ ನಾಡಕಛೇರಿಗಳಲ್ಲಿ ಈ ಕೆಳಕಂಡ ದಾಖಲಾತಿಗಳನ್ನು ನೀಡಿ ಅರ್ಜಿಗಳನ್ನು ತಕ್ಷಣವೇ ಸಲ್ಲಿಸಿ ಹಕ್ಕು ಬದಲಾವಣೆ ಮಾಡಿಕೊಳ್ಳಲು ಸಕಲೇಶಪುರ ತಹಸಿಲ್ದಾರ್ ಸುಪ್ರಿತಾ ತಿಳಿಸಿದ್ದಾರೆ.
ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲೆಗಳು. ಪ್ರಸ್ತುತ ಸಾಲಿನ ಪಹಣಿ . ವಂಶವೃಕ್ಷ. ಮೃತರ ಮರಣ ಪ್ರಮಾಣ ಪತ್ರ. ಮತ್ತು ಎಲ್ಲಾ ವಾರಸೂದಾರರ ಆದಾರ್ ಕಾರ್ಡ್
✍🏻 ಭರತ್ ಮಲ್ನಾಡ್

Share This Article
Leave a Comment

Leave a Reply

Your email address will not be published. Required fields are marked *