ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರ ಬಿಡುಗಡೆ ಸಮಾರಂಭ
ಅರಸೀಕೆರೆ ನಗರದ ರತ್ನ ಚಲನಚಿತ್ರ ಮಂದಿರದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಎಂಬ ಚಲನಚಿತ್ರ ಇಂದು ಬೆಳಗ್ಗೆ ಬಿಡುಗಡೆ ಸಮಾರಂಭದ ಮೂಲಕ ಚಾಲನೆ ನೀಡಲಾಯಿತು
ಸಂಘದ ಅಧ್ಯಕ್ಷ ವೇದಮೂರ್ತಿ ಚಲನಚಿತ್ರದಲ್ಲಿ ಅರಸಿಕೆರೆಯವರಾದ ಹಿರಿಯ ನಟ ದೊಡ್ಡಣ್ಣ ಕುಮಾರ್ ಬಂಗಾರಪ್ಪ ರಾಗಿಣಿ ಅವರು ನಟಿಸಿದ್ದು ಸಂಪೂರ್ಣವಾಗಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಕಷ್ಟಗಳನ್ನು ಮುಂದಿಟ್ಟುಕೊಂಡು ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಉತ್ತಮವಾಗಿ ನಟಿಸಿದ್ದಾರೆ ಹೀಗಾಗಿ ಚಲನಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಹಾರೈಸಿ ಮಾತನಾಡಿದರು
ಉಪಾಧ್ಯಕ್ಷರಾದ ಚನ್ನಾಪುರ ಶಿವರಾಜ್ ಮಾತನಾಡಿ ನ್ಯಾಯಬೆಲೆ ಅಂಗಡಿ ಮಾಲೀಕರು ಎಂದರೆ ಸಮಾಜದಲ್ಲಿ ತಪ್ಪು ಕಲ್ಪನೆ ಇರುತ್ತದೆ ಅಂಗಡಿ ಮಾಲೀಕರು ಸಹ ತಮ್ಮದೇ ಆದ ರೀತಿಯಲ್ಲಿ ಸಮಾಜ ಸೇವೆಯಂತೆ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇದನ್ನು ಚಲನಚಿತ್ರದಲ್ಲಿ ಚಲನಚಿತ್ರದ ತಂಡ ನಿರ್ದೇಶಕರು ಮತ್ತು ನಿರ್ಮಾಪಕರು ಉತ್ತಮವಾಗಿ ಚಲನಚಿತ್ರ ನಿರ್ಮಾಣ ಮಾಡಿದ್ದಾರೆಂದು ಹೇಳಿದರು ತಳಲುತೊರೆ ಲೋಕೇಶ್. ಅರಸಿಕೆರೆ ನಗರದ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ನಿರ್ದೇಶಕರಾದ ಜಾಫರ್ ಉಪಸ್ಥಿತರಿದ್ದರು
*ಚಲನಚಿತ್ರ ಬಿಡುಗಡೆ ಪ್ರದರ್ಶನಕ್ಕೆ ಚಾಲನೆ ನೀಡಿದ ಆಹಾರ ಇಲಾಖೆ ಶಿರಸ್ತೇದಾರ್ ಬಾಲಚಂದ್ರ*
ನ್ಯಾಯಬೆಲೆ ಅಂಗಡಿ ಮಾಲೀಕರ ಕರೆಯ ಮೇರೆಗೆ ಭೇಟಿ ನೀಡಿದ ಆಹಾರ ಇಲಾಖೆ ಅಧಿಕಾರಿಗಳಾದ ಶಿರಸ್ತೇದಾರ್ ಬಾಲಚಂದ್ರ ಆಹಾರ ಇಲಾಖೆ ನಿರೀಕ್ಷಕರಗಳಾದ ಶುಭಶ್ರೀ ಚಿಂತನ್ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರಕ್ಕೆ ಪ್ರದರ್ಶನಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಚಾಲನೆ ನೀಡಿದರು
ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರ ಬಿಡುಗಡೆ ಸಮಾರಂಭ
Leave a Comment
