ರಾಜ್ಯದಲ್ಲಿ ಬರಗಾಲ ಬಂದಿದೆ ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ ಧಾವಿಸಬೇಕಿದೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ರಾಜ್ಯದಲ್ಲಿ ಬರಗಾಲ ಬಂದಿದೆ ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ ಧಾವಿಸಬೇಕಿದೆ

  ಅರಸೀಕೆರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ  ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಅಧಿಕಾರ ವಹಿಸಿಕೊಂಡು ಇಲ್ಲಿಯವರೆಗೂ ಸಹ ರಾಜ್ಯದಲ್ಲಿ ಪೂರ್ಣ ಪ್ರಮಾಣದ  ಮಂತ್ರಿಮಂಡಲ ರಚನೆ ಆಗದೆ ಇರುವುದು  ರಾಜ್ಯದ ಜನರಿಗೆ ಸರ್ಕಾರದ ಮೇಲೆ  ನಾನಾ ತರದ  ಅನುಮಾನಗಳು ಉದ್ಭವಿಸುತ್ತಿದ್ದು  ರಾಜ್ಯ ಸರ್ಕಾರ ಗೊಂದಲದಲ್ಲಿದೆ  ಎಂದು ಧಾರವಾಡ ಜಿಲ್ಲೆ  ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಜೆಡಿಎಸ್ ವಕ್ತಾರರಾದ ಗುರುರಾಜ್ ಹುಣಸೆ ಮರದ   ಸರ್ಕಾರದ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರು

ರಾಜ್ಯದಲ್ಲಿ ಬರಗಾಲ ಬಂದಿದ್ದು ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ ರೈತರು  ಸಂಕಷ್ಟದಲ್ಲಿದ್ದಾರೆ ಸರ್ಕಾರ ಇದುವರೆಗೂ ಕೃಷಿ ಸಚಿವರಿಗೆ  ನೇಮಕ ಮಾಡಿಲ್ಲ  ರೈತರಗೆ  ಬೆಳೆ ವಿಮೆ ಗೊಬ್ಬರ ಹೀಗೆ ಹತ್ತಾರು ಸಮಸ್ಯೆಗಳಿದ್ದರೂ ಸಹ  ಕಾಂಗ್ರೆಸ್ ಪಕ್ಷದ  ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಶಾಸಕರು ದೆಹಲಿ ಪ್ರವಾಸದಲ್ಲಿದ್ದಾರೆ  ಮುಖ್ಯಮಂತ್ರಿಗಳು ಕೂಡಲೇ  ರೈತರ ಸಂಕಷ್ಟಕ್ಕೆ ಧಾವಿಸವಿದೆ ಎಂದು   ಗುರುರಾಜ್ ಹುಣಸಿ ಮರದ ಹೇಳಿದರು

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ರವರ ಉತ್ತರಕ್ರಿಯಾದಿ ಕಾರ್ಯಕ್ರಮಕ್ಕೆ  ತೆರಳುವ ಸಂದರ್ಭದಲ್ಲಿ  ಅರಸೀಕೆರೆ ತಾಲೂಕಿನ  ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳ  ಆಶೀರ್ವಾದ ಪಡೆದು  ಮಾಧ್ಯಮದವರೊಂದಿಗೆ  ಮಾತನಾಡಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಓಬಳಾಪುರ ಎನ್ ಬಸವರಾಜು. ಧಾರವಾಡ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಚಿದಂಬರ ನಾಡಗೌಡರು. ಹುಬ್ಬಳ್ಳಿ ಮಹಾನಗರ ಜೆಡಿಎಸ್  ಜಿಲ್ಲಾ  ಉಪಾಧ್ಯಕ್ಷರಾದ ತುಳಸಿ ಕಾಂತ್ ಖೋಡೆ. ಉಪಸ್ಥಿತರಿದ್ದರು

Share This Article
Leave a Comment

Leave a Reply

Your email address will not be published. Required fields are marked *