ಮಾಡಾಳು ಗ್ರಾಮದ ನಿರಂಜನ ಪೀಠದ ಹಿರಿಯ ಸ್ವಾಮೀಜಿ ಲಿಂಗೈಕ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ 19ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ 2026 ಜನವರಿ10 ರಂದು ಶನಿವಾರ ಮಠದ ಆವರಣದಲ್ಲಿ ಆವರಣದಲ್ಲಿನಡೆಯಲಿದೆ ಎಂದು ಶ್ರೀ ರುದ್ರಮುನಿ ಸ್ವಾಮೀಜಿ ಶನಿವಾರ ತಿಳಿಸಿದರು ಗ್ರಾಮದ ನಿರಂಜನ ಪೀಠದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಮಾತನಾಡಿ ಸಂಪ್ರದಾಯದಂತೆ ಪ್ರತಿವರ್ಷ ಜನವರಿ 10 ರಂದು ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮವನ್ನಮಠದ ತಾವತಿಯಿಂದ ಹಾಗೂ ಭಕ್ತಾದಿಗಳು ಆಚರಿಸಿಕೊಂಡು ಬರುತ್ತಿದ್ದಾರೆ ಈ ಬಾರಿಯೂ ಭಕ್ತರ ಆಶಯದಂತೆ ಈ ಬಾರಿಯೂ ಸಹ ಹಮ್ಮಿ ಕೊಳ್ಳಲಾಗಿದೆ ಎಂದು ಹೇಳಿದರು ಅಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಠದಲ್ಲಿರುವ ಕತ್ಯ ಗದ್ದುಗೆಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಗುವುದು ಎಂದರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಮಂತ್ರಿಗಳು ಶಾಸಕರು ಗಣ್ಯರು ಸಾಹಿತಿಗಳು ಪಾಲ್ಗೊಳ್ಳದಿದ್ದಾರೆ ಆದ್ದರಿಂದ ತಮ್ಮ ತಮ್ಮ ಸಲಹೆ ಸೂಚನೆಗಳನ್ನು ತಿಳಿಸಿ ಎಂದು ಅವರು ಹೇಳಿದರು ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ರಾಂಪುರ ಶೇಖರಪ್ಪ ಉಪಸ್ಥಿತರಿದ್ದರು







